ಭಗವದ್ಗೀತೆಯ ಶ್ಲೋಕಾರ್ಥ-೨೭
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಸಂಜಯ ಉವಾಚ
ಶ್ಲೋಕ..೨೭
ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ|
ತಾನ್ಸಮೀಕ್ಷ್ಯ ನ ಕೌಂತೇಯ: ಸರ್ವಾನ್ಬಂಧೂನವಸ್ಥಿತಾನ್ ||
ಕೃಷ್ಣ ಅರ್ಜುನನ ಆದೇಶದಂತೆ ಎರಡೂ ಸೇನೆಯ ನಡುವೆ ರಥವನ್ನು ತಂದು ನಿಲ್ಲಿಸಿದಾಗ , ಅರ್ಜುನ ಎರಡೂ ಕಡೆಯಲ್ಲಿ ನಿಂತಿರುವ ತನ್ನ ಬಂಧು ಬಾಂಧವರನ್ನು ನೋಡಿದನು. ತನ್ನದೇ ಮಾವಂದಿರು , .ಕೃತವರ್ಮನಂತ ಹಿತೈಷಿಗಳನ್ನೂ ನೋಡಿದಾಗ ಅವನ ಮನದಲ್ಲಿ ಬಂಧು ಬಾಂಧವರ ಮೇಲಿನ ವ್ಯಾಮೋಹ ಜಾಗೃತವಾಯಿತು .. ಅದುವರೆಗೂ ಬಹಳ ಉತ್ಸಾಹದಿಂದ ಯುದ್ಧೋನ್ಮಾದದಿಂದ , ಅಹಂಕಾರದ ಮಾತನಾಡಿದ ಅರ್ಜುನನ ಮನಸ್ಥಿತಿ ಮುಂದಿನ ಕ್ಷಣಗಳಲ್ಲಿ ಏನಾಗುತ್ತದೆ ಎಂದು ನಾಳೆ ನೋಡೋಣ 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





