Coastal News

ಉದ್ಯಾವರ ಪಂಚಾಯತ್ ಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ-ಅಧ್ಯಕ್ಷ ಹಾಗೂ ಸದಸ್ಯರ ಬೆಂಬಲ

ಉದ್ಯಾವರ: ಪಿತ್ರೋಡಿಯಲ್ಲಿ ಹೊಸ ಕೈಗಾರಿಕಾಗೆ ಪರವಾನಿಗೆ ನೀಡಿರುವುದಕ್ಕಾಗಿ ಪಕ್ಷಾತೀತವಾಗಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ನಾಗರಿಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.  ಕೈಗಾರಿಕಾ ಉದ್ದಿಮೆ…

ಫೆ.28 ಹಿರ್ಗಾನದಲ್ಲಿ ಕರ್ನಾಟಕ ಯುವ ಸಾಹಿತ್ಯ ಸಮ್ಮೆಳನ – ಅಧ್ಯಕ್ಷರಾಗಿ ಮಂಜುನಾಥ ಕಾಮತ್ ಆಯ್ಕೆ

ಅಜೆಕಾರು: ಆದಿಗ್ರಾಮೋತ್ಸವ ಸಮಿತಿಯು, ಆಖಿಲ ಕನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಲಯನ್ಸ್ ಕ್ಲಬ್ ಮುನಿಯಾಲು ಸಹಯೋಗದೊಂದಿಗೆ ಹಿರ್ಗಾನ…

ಫೆ.20-21: ಕಿದಿಯೂರು-ಕಡೆಕಾರ್ ಶ್ರೀಬ್ರಹ್ಮಲಿಂಗೇಶ್ವರ ಹಾಗೂ ನಾಗಸ್ಥಾನದ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಉಡುಪಿ: ಕಿದಿಯೂರು – ಕಡೆಕಾರ್ ಶ್ರೀಬ್ರಹ್ಮಲಿಂಗೇಶ್ವರ ಹಾಗೂ ನಾಗಸ್ಥಾನದ, ಶ್ರೀ ಬ್ರಹ್ಮಲಿಂಗೇಶ್ವರ, ನಾಗ ಹಾಗೂ ಪರಿವಾರ ದೇವರ ಪುನಃ ಪ್ರತಿಷ್ಠೆ,…

ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಸಂಚಾಲಕರಾಗಿ ಯಾಸೀನ್ ಕೋಡಿಬೆಂಗ್ರೆ ಆಯ್ಕೆ

ಉಡುಪಿ: ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಉಡುಪಿ ಜಿಲ್ಲಾ ಪದಾಧಿಕಾರಿಗಳ  ಆಯ್ಕೆಯ ಪ್ರಕ್ರಿಯೆಯು ಇಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಜೆ.ಐ.ಎಚ್’ನ ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಉಪ್ಪಿನಂಗಡಿ ಹಾಗೂ ಜಿಲ್ಲಾ ಸಂಚಾಲಕರಾದ  ಶಬ್ಬೀರ್ ಮಲ್ಪೆ ನೇತೃತ್ವದಲ್ಲಿ ನೆರವೇರಿತು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರ ಸರ್ವಾನುಮತದಿಂದ ಜಿಲ್ಲಾ ಸಂಚಾಲಕರಾಗಿ  ಯಾಸೀನ್ ಕೋಡಿಬೆಂಗ್ರೆಯನ್ನು ಆಯ್ಕೆ ಮಾಡಲಾಯಿತು. ಇವರು ಕಾನೂನು ಪದವೀಧರಾಗಿದ್ದು, ಪ್ರಸ್ತುತ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಝಕ್ರಿಯಾ ನೇಜಾರ್ ಅವರನ್ನು ಆಯ್ಕೆ ಮಾಡಲಾಗಿದ್ದು ಇವರು ಇಂಜಿನಿಯರ್ ಪದವೀಧರರಾಗಿದ್ದು ಪ್ರಸ್ತುತ ಉದ್ಯಮಿಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ  ಇಫ್ತೀಕಾರ್ ಉಡುಪಿಯವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಸಮಿತಿಗೆ ಸದಸ್ಯರಾಗಿ ನಬೀಲ್ ಗುಜ್ಜರ್’ಬೆಟ್ಟು,ಹುಸೇನ್ ಕೋಡಿಬೆಂಗ್ರೆ,ಮುಹಮ್ಮದ್ ಜೌಹರ್ ಹೂಡೆ, ಮೌಲನ ಇಬ್ರಾಹೀಮ್ ಸಯೀದ್ ಉಮರಿ ಕೋಟ, ರಿಝ್ವಾನ್  ಉಡುಪಿ, ಮುಹಮ್ಮದ್ ಶುಐಬ್ ಮಲ್ಪೆ, ಸಲಾಹುದ್ದೀನ್ ಹೂಡೆ, ಮುಹಮ್ಮದ್ ಶಾರೂಕ್ ಉಡುಪಿ, ಬಿಲಾಲ್ ಮಲ್ಪೆ, ಪರ್ವೇಝ್ ಕುಕ್ಕಿಕಟ್ಟೆ, ಝೈನುಲ್ಲಾ ಹೂಡೆ ಯವರನ್ನು ಆಯ್ಕೆ  ಮಾಡಲಾಗಿದೆ.

ತೆಂಕುತಿಟ್ಟು ಯಕ್ಷಗಾನದ ಸಿಡಿಲಮರಿ ಖ್ಯಾತಿಯ ಡಾ.ಶ್ರೀಧರ ಭಂಡಾರಿ ವಿಧಿವಶ

ಮಂಗಳೂರು: ತೆಂಕುತಿಟ್ಟು ಯಕ್ಷಗಾನದಲ್ಲಿ ಸಿಡಿಲಮರಿ ಎಂದೇ ಖ್ಯಾತಿ ಪಡೆದಿದ್ದ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಡಾ. ಶ್ರೀಧರ ಭಂಡಾರಿ (73)…

ಮುಂಡ್ಕೂರು ದೇವಳ ಜಾತ್ರಾ ಮಹೋತ್ಸವದಲ್ಲಿ ಪಂಕ್ತಿ ಭೇಧ – ಭಕ್ತಾಧಿಗಳು ಆಕ್ರೋಶ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆದ ರಥೋತ್ಸವ ಜಾತ್ರಾಮಹೋತ್ಸವದಲ್ಲಿ ಭಕ್ತರಿಗಾಗಿ…

ಮಂಗಳೂರು: ಸ್ಯಾನಿಟರಿ ನ್ಯಾಪ್ಕಿನ್ ನಲ್ಲಿ ಸಾಗಿಸುತ್ತಿದ್ದ ಅಕ್ರಮ 1ಕೆ.ಜಿ ಚಿನ್ನ ವಶಕ್ಕೆ

ಮಂಗಳೂರು: ಸ್ಯಾನಿಟರಿ ನ್ಯಾಪ್ಕಿನ್ ನಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ…

ಕ್ರಿಕೆಟ್ ಆಡುತ್ತಿರುವಾಗಲೇ ಆಟಗಾರ ಕುಸಿದು ಮೃತ್ಯು – ವಿಡಿಯೋ ವೈರಲ್

ಬೆಂಗಳೂರು: ಕ್ರಿಕೆಟ್ ಆಡುತ್ತಿರುವಾಗಲೇ ಆಟಗಾರನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಫೆ.17 ರಂದು ಪುಣೆಯ ಜುನ್ನಾರ್…

error: Content is protected !!