ಬೆಂಗಳೂರು: “ಮಹಾಕುಂಭ” ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ.

ಬೆಂಗಳೂರು – ದೇಶಾದ್ಯಂತ ಯಾವುದೇ ಯೋಜನೆಯನ್ನು ಪೂರ್ಣಗೊಳಿಸಲು ಅರಣ್ಯ ನಾಶವಾಗುತ್ತಿದ್ದೆ ಮತ್ತು ಬೆಳೆಯುತ್ತಿರುವ ನಗರ ನಿರ್ಮಾಣದಿಂದ ಕಾಡುಗಳ ಮಾರಣ ಹೋಮವಾಗುತ್ತಿರುವುದು ಬಹಳ ಆತಂಕಕಾರಿಯಾಗಿದೆ ಎಂಬುದಾಗಿ ಕಲ್ಯಾಣಕಾರಿ ಯೋಜನೆ ಪ್ರಚಾರ್ ಪ್ರಸಾರ ಅಭಿಯಾನದ ಮಾಧ್ಯಮ ಉಸ್ತುವಾರಿ ಲಲಿತ್ ಡಕ್ಲೀಯ ಆತಂಕ ವ್ಯಕ್ತ ಪಡಿಸಿದರು.


ಮಹಾ ಶಿವರಾತ್ರಿ ಮತ್ತು ಹರಿಯಾಲಿ ಅಮಾವಾಸ್ಯೆಯ ಸಂದರ್ಭದಲ್ಲಿ, ಪ್ರಧಾನ್ ಮಂತ್ರಿ ಜನ ಕಲ್ಯಾಣಕಾರಿ ಯೋಜನೆ ಪ್ರಚಾರ್ ಪ್ರಸಾರ ಅಭಿಯಾನದ ಪರವಾಗಿ ಮಹಾಕುಂಭ ಎಂಬ ಗಿಡ ನೆಡುವ ಕಾರ್ಯಕ್ರಮ ಆಯೋಜನೆ ಸಂದರ್ಭದಲ್ಲಿ ಅಭಿಯಾನದಲ್ಲಿ ಭಾನುವಾರ ಅಭಿಯಾನದ ಮೂಲಕ ರಾಷ್ಟ್ರವ್ಯಾಪಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಈ ಅಭಿಯಾನದಲ್ಲಿ, ರಾಜ್ ರಾಜೇಶ್ವರಿ ನಗರದಲ್ಲಿ ಕರ್ನಾಟಕ ರಾಜ್ಯ ಅಮಿತಾ ರಾಣಿ ಪಾಂಡೆ, ರಾಮಮೂರ್ತಿ ನಗರದಲ್ಲಿ ರಾಜ್ಯ ಸಂಘಟನೆಯ ಪ್ರಧಾನ ಮಂತ್ರಿ ದಿನೇಶ್ ಹಾರ್ದಿಕ್, ಹನುಮಂತ್ ನಗರ ಪ್ರದೇಶಗಳಲ್ಲಿ ಮಾಧ್ಯಮ ಉಸ್ತುವಾರಿ ಲಲಿತ್ ಡಕ್ಲೀಯ, ರಾಜ್ಯ ಸಚಿವ ಭಾರತ್ ಕುಮಾರ್, ಚಿತ್ತರಸನ್, ಯುವ ಅಧ್ಯಕ್ಷ ಖುಶಾಲ್ ಜೈನ್, ಮತ್ತ ರವೀಂಜಯ ಕುಲಕರ್ಣಿ ತಮ್ಮ ಪ್ರದೇಶಗಳಲ್ಲಿ ತೋಟಗಾರಿಕೆ ಚಟುವಟಿಕೆಗಳನ್ನು ನಡೆಸಲಾಯಿತು.


ಬೆಂಗಳೂರು ಗ್ರಾಮೀಣ, ದಾವಣಗೆರೆ , ಉಡುಪಿ , ತುಮಕೂರು, ಬಳ್ಳಾರಿ , ಹುಬ್ಬಳ್ಳಿ, ಇತ್ಯಾದಿ, ಕಡೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನ ನಡೆಸಲಾಯಿತು ,ರಾಷ್ಟ್ರೀಯ ಅಧ್ಯಕ್ಷ ಪುಶೇಶ್ ಆರ್ಯ ಅವರು ದೆಹಲಿಯಲ್ಲಿ ಸದಸ್ಯರೊಂದಿಗೆ ಸಸಿಗಳನ್ನು ನೆಟ್ಟರು, ದೇಶದಾದ್ಯಂತ ಅಭಿಯಾನದ ಸದಸ್ಯರು ಸುಮಾರು ಇಪ್ಪತ್ತು ಸಾವಿರ ಸಸಿ ನೆಟ್ಟರು ಮತ್ತು ಎಲ್ಲಾ ಸದಸ್ಯರು ಕರೋನದ ಈ ವಿಷಮ ಪರಿಸ್ಥಿತಿಯಲ್ಲಿ ಎಲ್ಲಾ ಜೀವಿಗಳನ್ನು ರಕ್ಷಿಸುವಂತೆ ಪ್ರಕೃತಿ ಮತ್ತು ದೈವವನ್ನು ಪ್ರಾರ್ಥಿಸಿದರು.

Leave a Reply

Your email address will not be published. Required fields are marked *

error: Content is protected !!