ಉಡುಪಿ: ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆ- ಫಲಿತಾಂಶ ಪ್ರಕಟ
![](https://udupitimes.com/wp-content/uploads/2024/02/first-1.jpg)
ಉಡುಪಿ ಫೆ.9(ಉಡುಪಿ ಟೈಮ್ಸ್ ವರದಿ): ಮಮ್ಮಿ ಡಿಜಿಟಲ್ ಸ್ಟುಡಿಯೋ ಉದ್ಯಾವರ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ನೇತೃತ್ವದಲ್ಲಿ ಪುತ್ತಿಗೆ ಮಠದ ಪರ್ಯಾಯೋತ್ಸವದ ಅಂಗವಾಗಿ ಆಯೋಜಿಸಿದ್ದ ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆ-2024 ರ ಫಲಿತಾಂಶ ಹೊರಬಿದ್ದಿದೆ.
![](https://udupitimes.com/wp-content/uploads/2024/02/second.jpg)
ಈ ಸ್ಪರ್ಧೆಯಲ್ಲಿ ಪರ್ಕಳದ ನಿಧೇಶ್ ಕುಮಾರ್ ಅವರು ತಮ್ಮ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ದ್ವಿತೀಯ ಬಹುಮಾನವನ್ನು ಪ್ರಸನ್ನ ಪೆರ್ಡೂರು, ತೃತೀಯ ಬಹುಮಾನವನ್ನು ಪ್ರಜ್ವಲ್ ಕಟಪಾಡಿ ಅವರು ಪಡೆದುಕೊಂಡಿದ್ದಾರೆ.
![](https://udupitimes.com/wp-content/uploads/2024/02/third.jpg)
ಇವರ ಜೊತೆಗೆ ಪ್ರದೀಪ್ ಉಪ್ಪೂರು, ಉಮೇಶ್ ಪೈ ಹಾಗೂ ಸುರಭಿ ರತನ್ ಅವರು ತಮ್ಮ ಛಾಯಾಚಿತ್ರಕ್ಕೆ ಸಮಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
![](https://udupitimes.com/wp-content/uploads/2024/02/Screenshot_2024-02-09-19-17-19-66_99c04817c0de5652397fc8b56c3b3817-1024x663.jpg)
![](https://udupitimes.com/wp-content/uploads/2024/02/c2.jpg)
![](https://udupitimes.com/wp-content/uploads/2024/02/Screenshot_2024-02-09-19-16-19-90_99c04817c0de5652397fc8b56c3b3817-1024x672.jpg)
ಈ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಛಾಯಾಗ್ರಾಹಕರಾದ ಅನಂತ ಕೃಷ್ಣ ಭಾಗವತ್, ಉಮೇಶ್ ಮಾರ್ಪಳ್ಳಿ ಅವರು ಭಾಗವಹಿಸಿದ್ದರು.
![](https://udupitimes.com/wp-content/uploads/2024/02/c1.jpg)
![](https://udupitimes.com/wp-content/uploads/2024/02/c3.jpg)
ಈ ಸಂದರ್ಭದಲ್ಲಿ ಈ ಎನ್.ಆರ್.ಐ ಉದ್ಯಮಿ ಹಾಗೂ ಸಮಾಜ ಸೇವಕ ಶೇಖ್ ವಹಿದ್, ಲಯನ್ಸ್ ಸನ್ ಶೈನ್ ಉದ್ಯಾವರ ಇದರ ಅಧ್ಯಕ್ಷ ಪ್ರೇಮ್ ಮಿನೇಜಸ್, ಕಾರ್ಯದರ್ಶಿ ಹರಿ ಉದ್ಯಾವರ, ಖಜಾಂಚಿ ರೋಶನ್ ಕ್ರಾಸ್ತ, ಸದಸ್ಯ ಎಡ್ವಿನ್ ಲೂಯಿಸ್ ಉಪಸ್ಥಿತರಿದ್ದರು.