ಕೋಟ: ಮಹಿಳೆಗೆ ಹಲ್ಲೆ, ಬೆದರಿಕೆ-ದೂರು ದಾಖಲು
ಕೋಟ ಫೆ.17 (ಉಡುಪಿ ಟೈಮ್ಸ್ ವರದಿ) : ಕುಂದಾಪುರದ ಮಂಡಾಡಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮನೆಗೆ ತೋಟಕ್ಕೆ ನೀರು ಪೂರೈಸಲು ಅಳವಡಿಸಿದ್ದ ಪೈಪ್ ನ್ನು ತುಂಡು ಮಾಡಿ ತೆಗೆದುಕೊಂಡು ಹೋಗಿದ್ದೂ ಮಾತ್ರವಲ್ಲದೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳೀಯ ನಿವಾಸಿ ಸುಮನ ಶೆಟ್ಟಿ ಅವರು ಫೆ.15 ರಂದು ಸಂಜೆ 6:00 ಗಂಟೆಗೆ ತಮ್ಮ ಕೃಷಿ ಭೂಮಿಗೆ ನೀರು ಬಿಡಲು ಹೋದಾಗ ಆರೋಪಿಗಳಾದ ರಮಣಿ ಶೆಟ್ಟಿ, ಚರಣ್ ಶೆಟ್ಟಿ, ಶಮಿತಾ ಶೆಟ್ಟಿ, ಜಗನ್ನಾಥ ಶೆಟ್ಟಿ ಇವರು ಅಕ್ರಮ ಪ್ರವೇಶ ಮಾಡಿ ಪೈಪ್ಗಳನ್ನು ತುಂಡು ಮಾಡಿ ತೆಗೆದುಕೊಂಡು ಹೋಗಿದ್ದು, ಮಾತ್ರವಲ್ಲದೆ ಸುಮನ ಶೆಟ್ಟಿ ಅವರಿಗೆ ಆವಾಚ್ಯ ಶಬ್ದಗಳಿಂದ ಬೈದು ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಹಾಗೂ ಕೃಷಿ ಪೈಪ್ಗಳನ್ನು ಕತ್ತರಿಸಿ ಕೃಷಿ ಗಿಡಗಳನ್ನು ಕಡಿದು 40,000 ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.