ಕಾರ್ಕಳ: ವಿವಾದಕ್ಕೆ ಕಾರಣವಾಗಿದ್ದ ನಾಥುರಾಮ್ ಗೋಡ್ಸ್ ನಾಮಫಲಕ ತೆರವು
ಕಾರ್ಕಳ ಜೂ.6: ಉಡುಪಿ ಜಿಲ್ಲೆಯ ಕಾರ್ಕಳದ ಬೋಳ ಗ್ರಾಮದಲ್ಲಿ ವಿವಾದಕ್ಕೆ ಕಾರಣವಾಗಿದ್ದ ನಾಥುರಾಮ್ ಗೋಡ್ಸ್ ನಾಮಫಲಕವನ್ನು ಇಂದು ತೆರವುಗೊಳಿಸಲಾಯಿತು.
ಬೋಳ ಗ್ರಾಮದಲ್ಲಿ ಕಿಡಿಗೇಡಿಗಳು ಗಾಂಧಿ ಹಂತಕ ನಾಥುರಾಮ್ ಗೋಡೆ ಹೆಸರನ್ನು ರಸ್ತೆಗೆ ನಾಮಕರಣ ನಾಮಫಲಕ ಹಾಕಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಇಂದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪಂಚಾಯತ್ ಅಧಿಕಾರಿಗಳ ಸಮಕ್ಷಮ ನಾಮಫಲಕ ತೆರವುಗೊಳಿಸಿದ್ದಾರೆ.
ನಾಮಫಲಕದ ಫೋಟೋ ವೈರಲ್ ಆಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ವಿಷಯದ ಗಂಭೀರತೆ ಅರಿತು ಸ್ಥಳಕ್ಕೆ ಆಗಮಿಸಿ ನಾಮಫಲಕ ತೆರವುಗೊಳಿಸಿ ಮುಂದೆ ಆಗಬಹುದಾದ ಅಹಿತಕರ ಘಟನೆ ತಪ್ಪಿಸಿದ್ದಾರೆ. ಇದಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೃತ್ಯವನ್ನು ಖಂಡಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.