ಕಾಪು: ಮನೆಯಲ್ಲಿ ಕಳ್ಳತನಕ್ಕೆ ಯತ್ನ

ಪಡುಬಿದ್ರಿ ಜೂ.6 (ಉಡುಪಿ ಟೈಮ್ಸ್ ವರದಿ): ಕಾಪುವಿನ ನಡ್ಸಾಲು ಗ್ರಾಮದ ಕನ್ನಂಗಾರ್ ಬೈಪಾಸ್ ಬಳಿಯ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನ ನಡೆಸಿರುವ ಘಟನೆ ನಡೆದಿದೆ.

 ನಡ್ಸಾಲು ಗ್ರಾಮದ ಶೇಖರ ಕರ್ಕೇರ ಎಂಬವರ ಮನೆಯಲ್ಲಿ ಕಳ್ಳತನದ ಯತ್ನ ನಡೆದಿದೆ. ಶೇಖರ ಕರ್ಕೇರ ಅವರು ಸಂಬಂಧಿಯ ಮದುವೆ ಕಾರ್ಯಕ್ರಮದ ನಿಮಿತ್ತ 2-3 ದಿನಗಳ ಹಿಂದೆ ಕುಟುಂಬ ಸಮೇತವಾಗಿ ಮುಂಬೈಗೆ ಹೋಗಿದ್ದರು.ಇವರು ತಮ್ಮ ಮನೆಯ ಪಕ್ಕದಲ್ಲಿ ಗದಗ ಮೂಲದ ಶೋಭ ಎಂಬವರ ಕುಟುಂಬಕ್ಕೆ ಉಳಿದುಕೊಳ್ಳಲು ಮನೆಯೊಂದನ್ನು ನೀಡಿದ್ದರು. ಜೂ.5 ರಂದು ಬೆಳಿಗ್ಗೆ ಶೋಭಾ ರವರು ಮನೆಯ ನಾಯಿಗೆ ಊಟ ಹಾಕಲು ಹೋಗಿದ್ದ ವೇಳೆ ಶೇಖರ ಕರ್ಕೇರ ರವರ ಮನೆಯ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ.

ಈ ವೇಳೆ ಶೋಭಾ ಅವರು ಶೇಖರ್ ಕರ್ಕೇರ ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಶೇಖರ ಕರ್ಕೇರ ಅವರು, ಲೀಲೇಶ್ ಸುವರ್ಣ ರವರಿಗೆ ಮಾಹಿತಿ ತಿಳಿಸಿ ಮನೆಯಲ್ಲಿ ಪರಿಶೀಲಿಸುವಂತೆ ತಿಳಿಸಿದ್ದಾರೆ. ಅದರಂತೆ ಲೀಲೇಶ್ ಅವರು ತಾರನಾಥ ಮತ್ತು ಹೆಜಮಾಡಿಯ ಸುಧೀರ್ ಎಂಬುವವರೊಂದಿಗೆ  ಮನೆಯ ಬಳಿ ಬಂದು ನೋಡಿದಾಗ ಮನೆಯ ಕೋಣೆಯ ಬಾಗಿಲು ಹಾಗೂ ಕಪಾಟಿನ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಡ್ರಾವರ್ ಹಾಗೂ ಕಪಾಟಿನ ಬಾಗಿಲು ಮುಚ್ಚಿದ್ದು ಅದರಲ್ಲಿ ಇದ್ದ ವಸ್ತುಗಳು ಯಥಾ ಸ್ಥಿತಿಯಲ್ಲಿ ಇದ್ದಿರುವುದು ಕಂಡುಬಂದಿದೆ. ಈ ಬಗ್ಗೆ ತಿಳಿಸಿದಾಗ ಶೇಖರ ಕರ್ಕೇರ ಅವರು, ಕೆಳ ಅಂತಸ್ಥಿನ ಡ್ರಾವರ್ ನಲ್ಲಿ ಒಂದು ಚಿನ್ನದ ಆಭರಣ ಹಾಗೂ ಮೇಲಂತಸ್ಥಿನ ಡ್ರಾವರ್‍ನಲ್ಲಿ 50,000 ರೂ ಹಣ ಇದ್ದ ಬಗ್ಗೆ ತಿಳಿಸಿರುತ್ತಾರೆ. ಹಾಗೂ ಕಳವಾದ ಸೊತ್ತುಗಳ ಮೌಲ್ಯವನ್ನು ಮುಂಬೈಯಿಂದ ಬಂದ ಮೇಲೆ ತಿಳಿಸುವುದಾಗಿ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಮನೆಯಲ್ಲಿ ಕಳ್ಳತಕ್ಕೆ ಯತ್ನ ನಡೆದಿರುವುದು ಕಂಡು ಬಂದಿದೆ. ಆದರೆ ಮನೆಯಲ್ಲಿ ಎಷ್ಟು ಪ್ರಮಾಣದಲ್ಲಿ ಕಳ್ಳತನ ನಡೆದಿದೆ ಎಂಬ ಬಗ್ಗೆ ಶೇಖರ ಕರ್ಕೇರ ಅವರು ಬಂದ ಬಳಿಕವೇ ತಿಳಿದು ಬರಬೇಕಿದೆ. ಈ ಬಗ್ಗೆ ಲೀಲೇಶ್ ಸುವರ್ಣ ಎಂಬವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!