ಭೂಕುಸಿತ: ಹಳಿ ತಪ್ಪಿದ ಮಂಗಳೂರು-ಮುಂಬೈ ಎಕ್ಸ್ಪ್ರೆಸ್ ರೈಲು

ಹುಬ್ಬಳ್ಳಿ ಜು 23: ಭೂಕುಸಿತ ಉಂಟಾಗಿದ್ದರಿಂದ ಚಲಿಸುತ್ತಿದ್ದ ರೈಲೊಂದು ಹಳಿ ತಪ್ಪಿದ ಘಟನೆ ದೂದ್ ಸಾಗರ್- ಸೋನೌಲಿಮ್ ನಿಲ್ದಾಣಗಳ ನಡುವೆ ನಡೆದಿದೆ.

ಮುಂಬೈಗೆ ತೆರಳುವ ವಿಶೇಷ (ಮಂಗಳೂರು-ಮುಂಬೈ ಎಕ್ಸ್ಪ್ರೆಸ್) ರೈಲು ಹಳಿ ತಪ್ಪಿದ್ದು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಮಡ್ಗಾಂವ್‍ಗೆ ವಾಪಾಸ್ಸು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ದೂದ್‍ಸಾಗರ್ ಹಾಗೂ ಸೋನಾಲಿಮ್ ನಡುವೆ ಎರಡು ಭೂಕುಸಿತ ಸಂಭವಿಸಿದೆ. ಘಟನೆ ನಡೆದ ತಕ್ಷಣವೇ ಕ್ಯಾಸಲ್ ರಾಕ್ ಹಾಗೂ ವಾಸ್ಕೋ ಡಾ ಗಾಮಾದ ಅಪಘಾತ ಪರಿಹಾರ ರೈಲು ಸ್ಥಳಕ್ಕೆ ಧಾವಿದ್ದು, ಪುನಃಸ್ಥಾಪನೆ ಕ್ರಮ ಕೈಗೊಂಡಿದೆ. ರೈಲಿನಲ್ಲಿದ್ದ ಒಟ್ಟು 887 ಪ್ರಯಾಣಿಕರಿಗೆ ಎಸ್‍ಡಬ್ಲ್ಯುಆರ್ ಬಸ್‍ಗಳನ್ನು ಬಳಸಿ ಬದಲಿ ವ್ಯವಸ್ಥೆ ಕಲ್ಪಿಸಲಾಯಿತು.

ಘಟನಾಸ್ಥಳಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಲ್ಖೆಡೆ ಸೇರಿದಂತೆ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!