ಉಡುಪಿ: ಆಮ್ ಆದ್ಮಿ ಪಕ್ಷದಿಂದ ಜಿ.ಪಂ. ಹಾಗೂ ತಾ.ಪಂ ಚುನಾವಣೆಗೆ ಸಿದ್ಧತೆ
ಉಡುಪಿ ಜುಲೈ 22: ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲಾ ಘಟಕದ ಸಭೆಯು ಉಡುಪಿ ಹಾಗೂ ದ.ಕ ಜಿಲ್ಲಾ ವೀಕ್ಷಕರಾದ ಅಶೋಕ್ ಎಡಮಲೆಯವರ ಉಪಸ್ಥಿತಿಯಲ್ಲಿ ಉಡುಪಿಯ ಶಾರದಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು.
ಆಮ್ ಆದ್ಮಿಪಾರ್ಟಿ ಉಡುಪಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಮುಂಬರಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಹಾಗೂ ಜಿಲ್ಲಾ ಮಟ್ಟದ ವಿವಿಧ ಘಟಕಗಳ ಕಾರ್ಯಕರ್ತರನ್ನು ಉದ್ದೇಶಿಸಿ ಅಶೋಕ್ ಎಡಮಲೆಯವರು ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲಾ ನಾಯಕರಾದ ಸುರೇಶ್ ಭಂಡಾರಿ, ಅಲ್ಫ್ರೇಡ್ ಲೋಬೊ, ಮಹಮ್ಮದ್ ಪೆರ್ಡೂರ್, ರಾಜ್ಯ ವಿದ್ಯಾರ್ಥಿ ಘಟಕದ ನಾಯಕರಾದ ಅಬ್ದುಲ್ ರಜಾಕ್ ಮರ್ದಾಳ ಉಪಸ್ಥಿತರಿದ್ದು ಪಕ್ಷ ಸಂಘಟನೆಯ ಬಗ್ಗೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಘಟಕದ ಪ್ರಧಾನ ಸಂಘಟಕರಾದ ಆಶ್ಲೇ ಸಂತೆಕಟ್ಟೆ, ಜೈಕಿಶನ್ ಉಡುಪಿ, ಒಲಿವೆರ್ ಡಿ’ ಸೋಜಾ, ಮಂಜುನಾಥ್ ಭಟ್ ಹಾಗೂ ಸ್ಟೀಫನ್ ಆರ್ ಲೋಬೋ, ಸುದೀಪ್, ಅರುಣ್, ಮೋಹನ್ ಉಡುಪಿ ಮತ್ತು ವಿವಿಧ ಘಟಕಗಳ ಕಾರ್ಯಕರ್ತರು ಉಪಸ್ಥಿತರಿದ್ದರು. ಮಂಜುನಾಥ್ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಶ್ಲೇ ಸಂತೆಕಟ್ಟೆ ವಂದಿಸಿದರು.