ಕುಂದಾಪುರ: ಕೆಎಸ್’ಆರ್’ಟಿಸಿ ಚಾಲಕ ಹೃದಯಾಘಾತದಿಂದ ನಿಧನ
ಕುಂದಾಪುರ ಜು.6(ಉಡುಪಿ ಟೈಮ್ಸ್ ವರದಿ): ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ.
ರವಿ (46) ಮೃತಪಟ್ಟವರು. ಇವರು ಕೆ.ಎಸ್.ಆರ್.ಟಿಸಿ. ಚಾಲಕರಾಗಿ ರಾಮನಗರ ಜಿಲ್ಲೆಯ ಮಾಗಡಿ ಡಿಪ್ಪೋದಲ್ಲಿ ಕೆಲಸ ಮಾಡಿಕೊಂಡಿದ್ದರು. ಜು.2 ರಂದು ಊರಿಗೆ ಬಂದವರು. ಮತ್ತೆ ಕೆಲಸಕ್ಕೆ ಹೋಗುವ ಸಲುವಾಗಿ ಬ್ಯಾಗ್ ತರಲು ಜು.5 ರಂದು ಕುಂದಾಪುರದ ಡಿಪ್ಪೋಗೆ ಅರುಣ್ ಕುಮಾರ್ ರವರೊಂದಿಗೆ ಕಾರ್ ನಲ್ಲಿ ನಿಟ್ಟೂರಿನಿಂದ ಹೊರಟಿದ್ದರು. ಈ ವೇಳೆ ಕೋಟೇಶ್ವರದ ಸ್ಮಶಾನದ ಎದುರು ತಲುಪುವಾಗ ರವಿ ಅವರು ಮಾತನಾಡದೇ ಇದ್ದುದನ್ನು ಗಮನಿಸಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ರವಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಅದರಂತೆ ರವಿಯವರು ಹೃದಯಾಘಾತ ಅಥವಾ ಇತರ ಆರೋಗ್ಯ ಸಮಸ್ಯೆಯಿಂದ ಮೃತ ಪಟ್ಟಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ.