ಕೋಟ: ಕಾಲು ಜಾರಿ ಬಾವಿಗೆ ಬಿದ್ದು ಯುವಕ ಮೃತ್ಯು

ಕೋಟ ಜು.6(ಉಡುಪಿ ಟೈಮ್ಸ್ ವರದಿ): ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕೋಟದಲ್ಲಿ ನಡೆದಿದೆ.

ರಾಘವೇಂದ್ರ (29) ಮೃತಪಟ್ಟವರು. ಇವರು ಕಲ್ಮರ್ಗಿ ಹಾರ್ಡ ವೇರ್ ನಲ್ಲಿ ಕೆಲಸ ಮಾಡಿಕೊಂಡಿದ್ದರು.ಜು.5 ರಂದು ರಾತ್ರಿ ಮನೆಯ ಹೊರಗಡೆ ನಾಯಿಗೆ ಅನ್ನ ಹಾಕಲು ಬಾವಿಯ ಬಳಿಯಿರುವ ಕಲ್ಲಿನ ಬಳಿ ಹೋಗುತ್ತಿರುವಾಗ ಆವರಣವಿಲ್ಲದ ಬಾವಿಗೆ  ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ತಕ್ಷಣ ಬಾವಿಗೆ ಏಣಿ ಇಳಿಸಿ ಬಾವಿಯಿಂದ ರಾಘವೇಂದ್ರ ಅವರನ್ನು ಮೇಲಕ್ಕೆತ್ತಲಾಯಿತು. ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!