ಸಮಾಜ ಸೇವಕ ವಿಶು ಶೆಟ್ಟಿಯವರಿಂದ ಮಂಗಳ ಮುಖಿಯರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಉಡುಪಿ ಮೇ.5(ಉಡುಪಿ ಟೈಮ್ಸ್ ವರದಿ): ಕೋವಿಡ್ ಪ್ರಭಾವದಿಂದ ಸಂಕಷ್ಟಕ್ಕೆ ಒಳಗಾದ ಅನೇಕ ಮಂದಿಯಲ್ಲಿ ಮಂಗಳ ಮುಖಿಯರೂ ಒಬ್ಬರು. 

ಕೊರೊನಾ ಲಾಕ್ ಡೌನ್ ನಿಂದ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ಮಂಗಳಮುಖಿಯರು‌ ತಮ್ಮ ಸಮುದಾಯದವರಿಗೆ ಎದುರಾಗಿರುವ ಸಮಸ್ಯೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಬಳಿ ಹೇಳಿಕೊಂಡಿದ್ದರು.

ಇದೀಗ ಮಂಗಳ ಮುಖಿಯರ ಸಮಸ್ಯೆ ಗೆ ಸ್ಪಂದಿಸಿರುವ ವಿಶು ಶೆಟ್ಟಿ ಅವರು, ಹತ್ತು ಸಾವಿರ ಮೌಲ್ಯದ ಆಹಾರದ ಕಿಟ್ ನ್ನು  ಅವರಿಗೆ ವಿತರಿಸಿದ್ದಾರೆ. ಈ ಮೂಲಕ ಕಾರ್ಕಳ 2, ಕುಂದಾಪುರ 2, ಉಡುಪಿ 6 ಮಂದಿ ಸೇರಿ ಒಟ್ಟು ಹತ್ತು ಮಂದಿ ಮಂಗಳಮುಖಿಯರು ವಿಶು ಶೆಟ್ಟಿ ಅವರಿಂದ ಆಹಾರ ಸಾಮಗ್ರಿಗಳ ಕಿಟ್ ಸ್ವೀಕರಿಸಿದರು. ಕಿಟ್ ಸ್ವೀಕರಿಸಿದ ಮಂಗಳ ಮುಖಿಯರು ವಿಶು ಶೆಟ್ಟಿ ಅವರ ಸೇವಾ ಕೈಂಕರ್ಯಕ್ಕೆ ಧನ್ಯವಾದ ತಿಳಿಸಿದರು. 

ಈ ವೇಳೆ ತಮ್ಮ ಸಮಸ್ಯೆ ಗಳ‌ ಬಗ್ಗೆ ಮಾತನಾಡಿದ‌ ಮಂಗಳ ಮುಖಿ ಲಾವಣ್ಯ ಅವರು, ನಮಗೆ ಎದುರಾಗಿರುವ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೆವು. ಆದರೆ ಯಾವೊಂದು ಸ್ಪಂದನೆಯು ದೊರೆಯಲಿಲ್ಲ. ನಮ್ಮ ಪರಿಸ್ಥಿತಿ ಬಗ್ಗೆ ಸಮಾಜಸೇವಕ ವಿಶು ಶೆಟ್ಟಿ ಅವರಲ್ಲಿ ತಿಳಿಸಿದ್ದೆವು, ತಕ್ಷಣ ಅವರು ಸ್ಪಂದಿಸಿದರು. ಇನ್ನಾದರೂ ಇಲಾಖೆಗಳು ನಮ್ಮ ಸಮಸ್ಯೆಗಳತ್ತ ಗಮನಿಸುವಂತಾಗಲಿ ಎಂದು ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!