ಉಡುಪಿ: ಪ.ಬಂಗಾಳದಲ್ಲಿ ಒಂದು ಕೋಮಿನ ಜನ ಕೊಲೆ, ಗೂಂಡಾಗಿರಿಯಲ್ಲಿ ತೊಡಗಿದ್ದಾರೆ-ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ ಮೇ.5 ( ಉಡುಪಿ ಟೈಮ್ಸ್ ವರದಿ): ಪಶ್ಚಿಮ ಬಂಗಾಳದಲ್ಲಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು.

ಈ ವೇಳೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಮತೀಯ ಗಲಭೆಗೆ ಪ್ರಚೋದನೆ ಕೊಡುತ್ತಿದ್ದಾರೆ. ಈ ಘಟನೆ ಯನ್ನು ದೇಶಾದ್ಯಂತ ಬಿಜೆಪಿ ಖಂಡಿಸುತ್ತದೆ‌ ಎಂದರು.

ಮಮತಾ ಬ್ಯಾನರ್ಜಿ ಗಲಭೆಗೆ ಪ್ರಚೋದನೆ ಜೊತೆ ಕುಮ್ಮಕ್ಕು ನೀಡುತ್ತಿದ್ದು ಅವರು ಸೋತು ಹತಾಶರಾಗಿದ್ದೇ ಗಲಭೆಗೆ ಕಾರಣ ಎಂದ ಅವರು, ಒಂದು ಕೋಮಿನ ಜನ ಕೊಲೆ, ಗೂಂಡಾಗಿರಿಯಲ್ಲಿ ತೊಡಗಿದ್ದಾರೆ. ಬಿಜೆಪಿ ಕಚೇರಿ, ಎಬಿವಿಪಿ ಕಚೇರಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇಂತಹ ಗೂಂಡಾಗಿರಿಯನ್ನು  ದೇಶ ಹಿಂದೆಂದೂ ಕಂಡಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಮಂಗಳೂರು ಪ್ರಭಾರಿ ಕೆ. ಉದಯ ಕುಮಾರ್ ಶಟ್ಟಿ, ವೀಣಾ ಶೆಟ್ಟಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!