ಹೆಬ್ರಿ: ಕಾರುಗಳು ಮುಖಾಮುಖಿ ಢಿಕ್ಕಿ ಓರ್ವ ಮೃತ್ಯು- ಹಲವರಿಗೆ ಗಾಯ

ಹೆಬ್ರಿ: ಕಾರುಗಳು ಮುಖಾಮುಖಿ ಢಿಕ್ಕಿ ಹೊಡೆದು  ಓರ್ವ ವ್ಯಕ್ತಿ ಮೃತಪಟ್ಟು, ಪ್ರಯಾಣಿಕರು ಗಾಯಗೊಂಡ ಘಟನೆ ಹೆಬ್ರಿಯ ಮುನಿಯಾಲು    ಪೇಟೆಯಲ್ಲಿ ಗುರುವಾರ ಸಂಜೆ ನಡೆದಿದೆ

ಚಟ್ಕಲ್ ಪಾದೆಯಿಂದ ಮುನಿಯಾಲು ಕಡೆಗೆ  ಸಾಗುತಿದ್ದ  ಕಾರು, ಕಾರ್ಕಳದಿಂದ ಹೆಬ್ರಿ ಕಡೆಗೆ ಸಾಗುತಿದ್ದ ಕಾರು ಮುಖಮುಖಿ ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಕಾರಿನ ಚಾಲಕ ಜಗದೀಶ್ ಆಚಾರ್ಯ ಮೃತಪಟ್ಟ ದುರ್ದೈವಿ. ಕಾರಿನಲ್ಲಿದ್ದ ಮಹಿಳೆಯೋರ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿದ್ದು, ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಒಂದೆ ತಿಂಗಳಲ್ಲಿ ಎಂಟು ಅಪಘಾತಗಳು: ಕಾಡುಹೊಳೆ ಮುನಿಯಾಲು ಚಟ್ಕಲ್ ಪಾದೆ ಮುಖ್ಯ ರಸ್ತೆಯು ಚತುಷ್ಪತ ರಸ್ತೆಯಾಗಿ ಮೆಲ್ದರ್ಜೆಗೆ ಏರಿಸಲಾಗುತಿದೆ.

ರಸ್ತೆ ಅಗಲೀಕರಣವಾಗಿದ್ದರೂ ಅಂಗಡಿ ಮಾಲೀಕರೊಬ್ಬರು ಸೆಟ್ ಬ್ಯಾಕ್ ಬಿಡದ ಹಿನ್ನಲೆಯಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಈಗಾಗಲೇ ಮುನಿಯಾಲು ಪರಿಸರದಲ್ಲಿ 10ಕ್ಕೂ ಹೆಚ್ಚು ಸಣ್ಣಪುಟ್ಟ ಅಪಘಾತಗಳು ಸಂಭವಿಸಿದ್ದು, ವಾಹನಗಳ ಮಿತಿಮೀರಿದ ವೇಗ ಹಾಗೂ ನಿರ್ಲಕ್ಷತನದ ಚಾಲನೆಯಿಂದ ಈ ಅಪಘಾತಗಳು ಸಂಭವಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಲೋಕೋಪಯೋಗಿ ಇಲಾಖೆ ವೇಗ ತಡೆಗಳ ಫಲಕಗಳನ್ನು ಅಳವಡಿಸಿ ಅಪಘಾತಗಳನ್ನು ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!