ಉಡುಪಿ: ಜೆ.ಪಿ. ನಡ್ಡಾರಿಗೆ ಸ್ವಾಗತ ಕೋರಿದ ಫ್ಲೇಕ್ಸ್ ಹರಿದ ಕಿಡಿಗೇಡಿ
ಉಡುಪಿ, ಫೆ.19:ನಾಳೆ ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸ್ವಾಗತ ಕೋರಿ ಬನ್ನಂಜೆಯಲ್ಲಿ ಹಾಕಲಾಗಿರುವ ಹಲವು ಬ್ಯಾನರ್ಗಳಿಗೆ ಕಿಡಿಗೇಡಿಯೊಬ್ಬ ಹಾನಿಗೈದಿರುವ ಘಟನೆ ಇಂದು ಬೆಳಗಿನ ಜಾವ 6ಗಂಟೆ ಸುಮಾರಿಗೆ ನಡೆದಿದೆ.
ಜೆ.ಪಿ.ನಡ್ಡಾ ಅವರಿಗೆ ಸ್ವಾಗತ ಕೋರಿ ಬನ್ನಂಜೆ ರಸ್ತೆ ಯುದ್ದಕ್ಕೂ ಹಲವು ಬ್ಯಾನರ್ಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್,ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಹಲವು ಮಂದಿ ಮುಖಂಡರು ಸ್ವಾಗತ ಕೋರಿರುವ ಐದಕ್ಕೂ ಹೆಚ್ಚು ಬ್ಯಾನರ್ಗಳನ್ನು ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ್ದಾರೆ.
ಈ ಬಗ್ಗೆ ಉಡುಪಿ ಜಿಲ್ಲಾ ಬಿಜೆಪಿಯಿಂದ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಸಂಬಂಧ ಸಿಟಿಟಿವಿ ಫುಟೇಜ್ ದೊರೆತಿದ್ದು, ಅದರಲ್ಲಿ ಇಂದು ಬೆಳಗಿನ ಜಾವ 45ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಬ್ಯಾನರ್ ಹರಿಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ತಿಳಿಸಿದ್ದಾರೆ