ಮುಂಬೈ ಹೊಟೇಲ್ ಉದ್ಯಮಿ, ಬಿಲ್ಲವ ಮುಖಂಡ ಹೂಡೆಯ ಓಂಪ್ರಕಾಶ್ ತುಕ್ರ ಜತ್ತನ್ ನಿಧನ

ಮುಂಬೈ, ಫೆ.13: ಅಂಧೇರಿ ಪೂರ್ವದ ಬಮ್ಮಾನ್‍ವಾಡ ಇಲ್ಲಿನ ಸಾಯಿನಿಧಿ ಹೊಟೇಲು ಮಾಲೀಕ ಓಂಪ್ರಕಾಶ್ ತುಕ್ರ ಜತ್ತನ್ (51) ಇಂದು ಮುಂಜಾನೆ ಹೋಲಿ ಸ್ಪಿರೀಟ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮೂಲತಃ ಉಡುಪಿಯ ಕೆಮ್ಮಣ್ಣು ಹೂಡೆಯ ಓಂಪ್ರಕಾಶ್ ಅಂಧೇರಿ ಸಹಾರ್ ವಿಲೇಜ್‍ನಲ್ಲಿ ನೆಲೆಸಿದ್ದರು. ಇವರು ಕಳೆದ ಶನಿವಾರ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. ಬಿಲ್ಲವರ ಯುವ ಧುರೀಣನಾಗಿ,ಕೊಡುಗೈ ದಾನಿಯಾಗಿ ಸಮಾಜ ಸೇವೆಯಲ್ಲಿ ತೊಡಸಿಕೊಂಡಿದ್ದರು.

ಅವಿವಾಹಿತರಾಗಿದ್ದ ಮೃತರು ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!