ಉಡುಪಿಯ ಹೆಸರಾಂತ ಬುಲೆಟ್ ಗ್ಯಾರೇಜ್ ಮಾಲಕ ಹೃದಯಾಘಾತದಿಂದ ನಿಧನ
ಉಡುಪಿ ಅ.25(ಉಡುಪಿ ಟೈಮ್ಸ್ ವರದಿ): ಇಂದ್ರಾಳಿಯ ‘ರಾಯಲ್ ಎನ್ ಫೀಲ್ಡ್ ಆಟೋ ಕೇರ್’ ನ ಮಾಲಕ ರಶೀದ್ ಸಾಹೇಬ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದ್ರಾಳಿ ಬುಡ್ನಾರ್ ನಿವಾಸಿ 74 ವರ್ಷದ ರಶೀದ್ ಸಾಹೇಬ್ ಅವರು ಕಳೆದ ರಾತ್ರಿ 9.30 ರ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಉಡುಪಿ ಹೈಟೆಕ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಓರ್ವ ಮಗ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಬುಲೆಟ್ ಬೈಕ್ ರೀಪೇರಿ ಮಾಡುವಲ್ಲಿ 45 ವರ್ಷಗಳ ಅನುಭವ ಹೊಂದಿದ್ದು, ಬುಲೆಟ್ ಪ್ರಿಯರಿಗೆ ಚಿರಪರಿಚಿತರಾಗಿದ್ದರು. ಇದೀಗ ಇವರ ಅಕಾಲಿಕ ಮರಣ ಅವರ ಬಂಧು ಮಿತ್ರರಿಗೆ ತೀವ್ರ ಆಘಾತ ಉಂಟು ಮಾಡಿದೆ.