ಮೂರು ಮಕ್ಕಳ ತಂದೆಯಿಂದ ತ್ರಿವಳಿ ತಲಾಖ್:ಬಂಧನ

ಉಡುಪಿ: ಮೂರು ಮಕ್ಕಳ ತಂದೆಯಿಂದ ಪತ್ನಿಗೆ ತ್ರಿವಳಿ ತಲಾಖ್ ನೀಡಿ ಜೀವ ಬೆದರಿಕೆ ನೀಡಿರುವ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಾಲಾಗಿದೆ.
19 ವರ್ಷಗಳ ಹಿಂದೆ ಮಂಗಳೂರಿನ ಪೆರ್ಮುದೆ ಮಸೀದಿ ಹಾಲ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಶಕೀಲ್ ಅಹಮ್ಮದ್ ಮತ್ತು ಶಬನಾ ಅವರ ಮದುವೆ ನಡೆದಿತ್ತು. ಇವರಿಗೆ ಮೂರು ಮಕ್ಕಳು ಇದ್ದು, ಮದುವೆ ಆದಂದಿನಿಂದ ಪತ್ನಿ ಶಬನಾಳಿಗೆ ನಿರಂತರ ಮಾನಸಿಕ,ದೈಹಿಕ ಚಿತ್ರಹಿಂಸೆ ನೀಡುತ್ತಿದ್ದಾನೆ.

ಇದನ್ನೆಲ್ಲವನ್ನು ಮಕ್ಕಳನ್ನು ನೋಡಿಕೊಳ್ಳಬೇಕೆಂಬ ಇಚ್ಚೆಯಿಂದ ಸಹಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಮಾರ್ಚ್‌ನಿಂದ ಗಂಡನು ಪ್ರತ್ಯೇಕ ವಾಸವಿದ್ದು, ಸೆ.16 ರಂದು ಇಂದ್ರಾಳಿ ದೇವಸ್ಥಾನ ರಸ್ತೆಯಲ್ಲಿ ನಾನು ನಡೆದು ಕೊಂಡು ಹೋಗುತ್ತಿರುವ ಸಂದರ್ಭ ಅಲ್ಲಿಗೆ ಬಂದ ಪತಿ ತಾನು ಬೇರೆ ಮದುವೆ ಆಗುವುದಾಗಿ ಹೇಳಿ ಮೂರು ಬಾರಿ ತಲಾಖ್ ಹೇಳಿ ಕೊಲೆ ಬೆದರಿಕೆ ಹಾಕಿರುವುದಾಗಿ ಶಬನಾ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!