ಸ್ವಚ್ಛತೆಯ ಆರಂಭ ಮನೆಯಿಂದಲೇ: ಸ್ವಚ್ಛತೆಗಾಗಿ ಜಾದೂ ಕಾರ್ಯಕ್ರಮ

ಉಡುಪಿ ಜೂ ೧೮: ವಿದ್ಯೋದಯ ಟ್ರಸ್ಟ್ (ರಿ.) ನ ಅಂಗ ಸಂಸ್ಥೆಯಾದ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ‘ರಾಮಕೃಷ್ಣ ಮಿಶನ್ ಸ್ವಚ್ಛತಾ ಅಭಿಯಾನ’ದ ಅಡಿಯಲ್ಲಿ ಸ್ವಚ್ಛತೆಗಾಗಿ ಜಾದೂ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಕೇಂದ್ರ ಬಿಂದುವಾದ ಜಾದೂ ಮಾಂತ್ರಿಕ ಕುದ್ರೋಳಿ ಗಣೇಶ್‌ರವರು ತಮ್ಮ ಜಾದೂ ಪ್ರದರ್ಶನದ ಮೂಲಕ ಸ್ವಚ್ಛತೆಗಾಗಿ ಜಾದೂ ಅಲ್ಲ ಸ್ವಚ್ಛತೆಗಾಗಿ ಜಾಡು ಎಂಬುದನ್ನು ಮನವರಿಕೆ ಮಾಡಿದರು.

ಭೂಮಿಯನ್ನು ಸ್ವಚ್ಛವಾಗಿ ಇಡಲು ಪ್ಲಾಸ್ಟಿಕ್ ಬದಲು ಪೇಪರ್ ಹಾಗೂ ಬಟ್ಟೆಗಳನ್ನು ಬಳಸಿ, ವಿದ್ಯಾರ್ಥಿಗಳಿಗೆ ಗಿಡ ನೆಡುವಂತೆ ಜಾದೂವಿನ ಮೂಲಕ ಕರೆ ಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಸ್ವಚ್ಛತೆಗಾಗಿ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ಸ್ವೀಕಾರ ಮಾಡಿಸಿದರು.

Leave a Reply

Your email address will not be published. Required fields are marked *

error: Content is protected !!