ಆರ್ಥಿಕ ಮುಗ್ಗಟು ಟ್ಯಾಕ್ಸಿ ಚಾಲಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಆರ್ಥಿಕ ಮುಗ್ಗಟ್ಟಿನಿಂದ ಟ್ಯಾಕ್ಸಿ ಚಾಲಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.ಮಣಿಪಾಲ ಹುಡ್ಕೋ ಕಾಲೊನಿ ನಿವಾಸಿ ದಿನೇಶ್ (52 )ಆತ್ಮಹತ್ಯೆ ಮಾಡಿಕೊಂಡ ಟ್ಯಾಕ್ಸಿ ಚಾಲಕ.

ಈಚೆಗಷ್ಟೇ ತನ್ನ ಮಗಳ ಮದುವೆ ನೆರವೇರಿಸಿದ ದಿನೇಶ್ ಬಹಳಷ್ಟು ಆರ್ಥಿಕ ಮುಗ್ಗಟ್ಟಿನಿಂದ  ಇದ್ದರು. ಇದರ ನಡುವೆ ಇವರ ಪುತ್ರ   ಕಾರನ್ನು ಚಲಾಯಿಸಿಕೊಂಡು ಪಡುಬಿದ್ರೆಯಲ್ಲಿ   ಅಪಘಾತವೆಸಗಿದ್ದ, ಮಗ ಬಳಿ ಯಾವುದೇ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿ ಅಪಘಾತ ಗೊಳಿಸಿದ ನಂತರ ಇವರು  ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದರು.

ಬೆಳಿಗ್ಗೆ ದೆಹಲಿಗೆ ಹೊರಟ ‘ದುರಂತ ಎಕ್ಸ್ಪ್ರೆಸ್’ ರೈಲಿಗೆ ಪೆರಂಪಳ್ಳಿ ಸುವರ್ಣ ನದಿಯ ಸೇತುವೆ ಬಳಿ  ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಇವರು ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು

Leave a Reply

Your email address will not be published. Required fields are marked *

error: Content is protected !!