ಉಡುಪಿ: ಗಾಂಜಾ ಮಾರಾಟ, ಇಬ್ಬರ ವಶ: 8.70 ಲಕ್ಷದ ಸ್ವತ್ತು ವಶಕ್ಕೆ

ಉಡುಪಿ: ಸೆನ್ ಅಪರಾಧ ಪೊಲೀಸ್‌ರಿಗೆ ದೊರತ ಖಚಿತ ಮಾಹಿತಿಯಂತೆ ಕಲ್ಸಂಕ ಬಳಿಯ ಶಂಕರನಾರಾಯಣ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳ ಬಂಧನ. 4 ಕಿಲೋ ಗಾಂಜಾ ವಶ.


ಆರೋಪಿಗಳಾದ ಹೈದರಬಾದ್ ಮೂಲದ ಪ್ರಸ್ತುತ , ಸರಳಬೆಟ್ಟು ನಿವಾಸಿ ತಿಪಿರ್ ನೇನಿ ಆದಿತ್ಯ (21), ತೆಲಂಗಣ ಮೂಲದ ಪ್ರಸ್ತುತ ಈಶ್ವರ ನಗರದ ಬಾಡಿಗೆ ಮನೆಯಲ್ಲಿರುವ ಮೊಗಿಲಿ ಹೇಮಂತ್ ರೆಡ್ಡಿ (20) ಎಂಬಿಬ್ಬರು ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡಲು ಹೊಂದಿದ್ದ 1,20,000/- ಮೌಲ್ಯದ 4 ಕಿಲೋ 034 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.


ಆರೋಪಿಗಳಿಂದ ಗಿರಾಕಿ ಕುದುರಿಸಲು ಬಳಸಿದ್ದ2 ಮೊಬೈಲ್ ಪೋನ್, ಗಾಂಜಾ ಮಾರಾಟ ಮಾಡಲು ಪ್ರಯಾಣಕ್ಕೆ ಬಳಸಿ ರೂಪಾಯಿ ಇನ್ನೋವ ಕಾರು ಮತ್ತು ಸ್ಕೂಟರ್‌ನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 8,70,000ಆಗಿದ್ದು, ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸೀತಾರಾಮ ಪಿ. ಮತ್ತು ಪಿ.ಎಸ್.ಐ. ಲಕ್ಷ್ಮಣ, ಎ.ಎಸ್.ಐ. ಕೇಶವ ಗೌಡ ಹಾಗೂ ಸಿಬ್ಬಂದಿಯವರಾದ ಕೃಷ್ಣಪ್ರಸಾದ್, ನಾಗೇಶ್, ರಾಘವೇಂದ್ರ, ಅರುಣ್ ಕುಮಾರ್, ಸಂಜಯ್ ಮತ್ತು ಜೀವನ್ ಪಾಲ್ಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!