ಡಾ. ಪ್ರಭಾಕರ ಭಟ್ ಭೇಟಿಯಾದ ನಳಿನ್

ಬಂಟ್ವಾಳ: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಸಂಜೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರನ್ನು ಭೇಟಿಯಾಗಿ ಆರ್ಶೀವಾದ ಪಡೆದರು.ಈ ಸಂದರ್ಭ ದಲ್ಲಿ ನಳಿನ್ ಕುಮಾರ್ ಕಟೀಲ್ ಅವರನ್ನು ಡಾ.ಕಮಲಾ ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು.

ಬಳಿಕ ಡಾ.ಭಟ್ ಅವರೊಂದಿಗೆ ಮುತುಕತೆ ನಡೆಸಿದರಲ್ಲದೆ ಒಂದಷ್ಟು ಹೊತ್ತು ವಿದ್ಯಾರ್ಥಿಗಳೊಂದಿಗೂ ಬೆರೆತರು. ರಾಜ್ಯಾಧ್ಯಕ್ಷರೊಂದಿಗೆ ಗಣೇಶ್ ಕಾರ್ಣಿಕ್, ಶಾಲಾ ಸಂಚಾಲಕರಾದ ವಸಂತ ಮಾಧವ, ಪ್ರಾಂಸುಪಾಲರಾದ ಕೃಷ್ಣ ಪ್ರಸಾದ್,  ನಾರಾಯಣ ಸೋಮಯಾಜಿ, ಮಾಜಿ ಜಿಪಂ ಸದಸ್ಯ ಚೆನ್ನಪ್ಪ ಕೋಟ್ಯಾನ್ , ಅಣ್ಣು ಪೂಜಾರಿ ಮೊದಲಾದವರಿದ್ದರು .

Leave a Reply

Your email address will not be published. Required fields are marked *

error: Content is protected !!