ಪಂಚಕರ್ಮ ಉಚಿತ ತಪಾಸಣಾ, ಚಿಕಿತ್ಸಾ ಶಿಬಿರ

ಉಡುಪಿ: ಮುನಿಯಾಲು ಆಯುರ್ವೇದ ಕಾಲೇಜು ಮತ್ತು  ಆಸ್ಪತ್ರೆ, ಮಣಿಪಾಲದ ವತಿಯಿಂದ ಮೊಣಕಾಲು (ಓಸ್ಟಿಯೋ ಆರ್ತ್ರೈಟಿಸ್) ಮತ್ತು ಭುಜ ನೋವಿ (ಫ಼್ರೋಜನ್ ಶೋಲ್ಡರ್) ಗೆ   ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಜುಲೈ 15 ರಿಂದ ಜುಲೈ 27 ರವರೆಗೆ ಬೆಳಿಗ್ಗೆ 9 :00 ರಿಂದ ಮಧ್ಯಾಹ್ನ 4 : 00 ರವರೆಗೆ ನಡೆಯಲಿದೆ.

ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೊಣಕಾಲು (ಓಸ್ಟಿಯೋ ಆರ್ತ್ರೈಟಿಸ್) ಮತ್ತು ಭುಜ ನೋವಿನಿಂದ   (ಫ಼್ರೋಜನ್ ಶೋಲ್ಡರ್) ಗೆ   ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್‍ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ.ಯವರು ದಿಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು, ಸ್ನಾತಕೋತ್ತರ ಶಿಕ್ಷಣ ವಿಭಾಗದ ಡೀನ್‌ರಾದ ಡಾ. ಗುರುರಾಜ ತಂತ್ರಿ, ವೈದ್ಯರಾದ ಶ್ರೀಪತಿ ಆಚಾರ್ಯ, ಡಾ|ವೀರಜ್ ಹೆಗ್ಡೆ,  ಡಾ|ಪ್ರಮೋದ್ ಶೇಟ್ ಬಿ, ಸಂಸ್ಥೆಯ ಆಡಳಿತ ನಿರ್ದೇಶಕರಾದ ಯೋಗೀಶ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈಗಾಗಲೇ ಅನೇಕ ರೋಗಿಗಳು ಈ ಚಿಕಿತ್ಸಾ ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿದ್ದು ಸಾರ್ವಜನಿಕರು ಇದರ  ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!