ಕಾರ್ಕಳ : ಒಂಟಿ ಮಹಿಳೆಗೆ ಪಿಸ್ತೂಲು ತೋರಿಸಿ ಚಿನ್ನಾಭರಣ ದರೋಡೆ

ಕಾರ್ಕಳ : ಒಂಟಿ ಮಹಿಳೆಗೆ ಪಿಸ್ತೂಲು ತೋರಿಸಿ ಲಕ್ಷಾಂತರ ರೂಪಾಯಿ  ಮೌಲ್ಯದ ಚಿನ್ನಾಭರಣಗಳನ್ನು ದರೋಡೆಗೈ ಘಟನೆ  ಪ್ರಕರಣ ಕಾರ್ಕಳ ತಾಲೂಕಿನ ಇರ್ವತ್ತೂರಿನಲ್ಲಿ ನಿನ್ನೆ ರಾತ್ರಿ ನಡೆದಿದೆ .ನಿನ್ನೆ ರಾತ್ರಿ ಒಂಬತ್ತು ಗಂಟೆಗೆ ಅಪರಿಚಿತ ನೋರ್ವ ವೇಣುಗೋಪಾಲ ದೇವಸ್ಥಾನ ಸಹಾಯಕ ಅರ್ಚಕ ಹರೀಶ್ ಭಟ್ ಅವರ ಪತ್ನಿ ಲಕ್ಮೀ(45)  ಮನೆಯಲ್ಲಿ ಟಿವಿ ಸೀರಿಯಲ್ ದ ನೋಡುತ್ತಿದ್ದ ಸಂದರ್ಭ ಯಾರೋ ಭಟ್ಟರನ್ನು ಕರೆದ ಶಬ್ದ ಕೇಳಿ ಮನೆಯ ಹಿಂಬಾಗಿಲು ತೆರೆದಾಗ  ಅಪರಿಚಿತ ನೋರ್ವ ಮನೆಯೊಳಗೆ ನುಗ್ಗಿ ಲಕ್ಷ್ಮಿ ಅವರಲ್ಲಿ ಬೊಬ್ಬೆ ಹೊಡಿಯಬೇಡ ಎಂದು ಬಾಯಿಯನ್ನು ಗಟ್ಟಿ ಹಿಡಿದುಕೊಂಡು ಬೆದರಿಸಿದ್ದ.

ಈ ಸಂದರ್ಭ ಮತ್ತೆ ಮೂವರು ಅಪರಿಚಿತರು ಮನೆಯೊಳಗೆ ನುಗ್ಗಿ ಮಹಿಳೆಯನ್ನು ಬಾಯಿಯನ್ನು ಪ್ಲಾಸ್ಟರ್ ಮುಖಾಂತರ ಬಂಧಿಸಿ ಕೈ ಕಾಲು  ಕಟ್ಟಿಹಾಕಿದ್ದರು. ಬಂದ ಅಪರಿಚಿತರಲ್ಲಿ ಓರ್ವ ತನ್ನ ಕೈಯಲ್ಲಿದ್ದ ಪಿಸ್ತೂಲನ್ನು ತೆಗೆದು ಬೊಬ್ಬೆ ಹಾಕದಂತೆ ಬೆದರಿಸುತ್ತಿದ್ದ, ಮಾತ್ರವಲ್ಲದೆ ಬಾಯಿಗೆ ಬಟ್ಟೆಯನ್ನು ತುರುಕಿಸಿದ್ದ. ಈ ಸಂದರ್ಭ ಇಬ್ಬರು ಮನೆಯೊಳಗೆಲ್ಲ ಜಾಲಾಡಿ ಮನೆಯ ಕೋಣೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ತುಳಸಿ ಸರ ,  ಚಿನ್ನದ ಪವಿತ್ರವೂ ಉಂಗುರ, ಬೆಂಡೋಲೆ ಹಾಗೂ ನಗದು ಮೂರು ಸಾವಿರ ದೋಚಿ ಪರಾರಿಯಾಗುತ್ತಾರೆ.  ದರೋಡೆಕೋರರು ಒಟ್ಟು  1.26 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದರೋಡೆಗೈದು ಪರಾರಿಯಾಗುತ್ತಾರೆ . ಅಪರಿಚಿತರು ತುಳು ,ಹಿಂದಿ ಮಾತನಾಡುತ್ತಿದ್ದರು.ಅರ್ಚಕರು ಚೌತಿ ಪ್ರಯುಕ್ತ ದಿನಾಲೂ ರಾತ್ರಿ ಮನೆಗೆ ತಡವಾಗಿ ಹೋಗುವ ಮಾಹಿತಿ ತಿಳಿದಿರುವ ಸ್ಥಳೀಯರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!