ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಹುಲಿವೇಷಧಾರಿಗಳ ವಾಹನ ಅಪಘಾತಕ್ಕೆ ಕಾರಣ

ಉಡುಪಿ: ಸಂತೆಕಟ್ಟೆಗೆ ಹುಲಿ ವೇಷಧಾರಿಗಳನ್ನು ಕರೆದುಕೊಂಡು ಹೋಗುತ್ತಿದ್ದ407 ಟೆಂಪೋ  ಮುಂದಿದ್ದ ಬೈಕ್   ಓವರ್ ಟೆಕ್ ಮಾಡುವ ಸಂದರ್ಭ   ಸ್ಕಿಡ್ ಆಗಿ ಓರ್ವ ವೇಷಧಾರಿ ಮೃತಪಟ್ಟು ಐವರು ಗಾಯಗೊಂಡ ಘಟನೆಗೆ ಟೆಂಪೋ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಮಲ್ಪೆ ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಹನ್ನೊಂದುವರೆ ಸುಮಾರಿಗೆ ಲಕ್ಷ್ಮಿ ನಗರದಿಂದ ಟೆಂಪೋದಲ್ಲಿ 13 ಹುಲಿವೇಷಧಾರಿಗಳನ್ನು ಕಲ್ಯಾಣಪುರ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಪ್ರಯುಕ್ತ ಹುಲಿವೇಷ  ಹಾಕಿಕೊಂಡು ಸಂತೆ ಕಟ್ಟೆ ಕಡೆ ತೆರಳುತ್ತಿದ್ದಾಗ ನೇಜಾರಿನಲ್ಲಿ ಎದುರಿದ್ದ ಬೈಕ್ ಅನ್ನು ಓವರ್ಟೆಕ್ ಮಾಡಲು ಟೆಂಪೋ ಚಾಲಕ ವಿಶಾಲ್ ಪ್ರಯತ್ನಿಸಿದಾಗ ಈ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ .ಈ ದುರಂತದಲ್ಲಿ ಸುಮಂತ್ ಪಡುಬಿದ್ರೆ,(20 ) ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದು, ಚಾಲಕ ವಿಶಾಲ್  (21) ಸುಧಾಕರ್  ನೇಜಾರ್ (19) ಯತೀಶ್ ಮಲ್ಲಾರ್,(21) ಸುಧೀರ್  ನೇಜಾರ್ (18), ಪ್ರಶಾಂತ್ ನೇಜಾರ್ (27)ಗಾಯಗೊಂಡು ಕೆಎಂಸಿ ಆಸ್ಪತ್ರೆ ಒಳ ರೋಗಿಗಳಾಗಿ ದಾಖಲಾಗಿದ್ದಾರೆ .

Leave a Reply

Your email address will not be published. Required fields are marked *

error: Content is protected !!