ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆಗಳ ಮಹಾಪೂರ

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಗುರುವಾರ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಕಾರ್ಯಕರ್ತರಲ್ಲಿ ಯಾವುದೇ ಸಂಭ್ರಮಾಚರಣೆ ಮೆರವಣಿಗೆ ಬೇಡವೆಂದು ಹೇಳಿಕೊಂಡರು ಅವರ ಅಭಿಮಾನಿಗಳು , ಕಾರ್ಯಕರ್ತರು ನಾಲ್ಕು ಗಂಟೆಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಂದು ಅವರ ಸ್ವಾಗತಿಸಲು ಕಾಯುತ್ತಿದ್ದರು.

ವಾಹನದಿಂದ ಇಳಿಯುತಿದ್ದಂತೆ ಮೊದಲಿಗೆ ಕಾರ್ಯಕರ್ತರ ಜೊತೆ ಹಸ್ತಲಾಘವ ಮಾಡಿ ಅವರ ಜೊತೆ ಈ ಹಿಂದೆ ಇದ್ದ ನಮ್ರತೆ ಯಂತೆ ಮಾತನಾಡುತ್ತಿದ್ದು ಕಂಡುಬಂತು.  ಮಹಿಳಾ ಮೋರ್ಚಾದ ಪದಾಧಿಕಾರಿಗಳಿಂದ ಅವರನ್ನು ಆರತಿ ಬೆಳಗಿಸಿ ಜಿಲ್ಲಾ ಕಚೇರಿಗೆ ಬರಮಾಡಿಕೊಳ್ಳಲಾಯಿತು.ಜಿಲ್ಲಾ ಬಿಜೆಪಿ ವತಿಯಿಂದ ಮಟ್ಟಾರ್ ರತ್ನಾಕರ ಹೆಗ್ಡೆ  ನೂತನ ಸಚಿವರನ್ನು ಅಭಿನಂದಿಸಿದರು.ವಿವಿಧ ಸಂಘ-ಸಂಸ್ಥೆಗಳು ,ಬಿಜೆಪಿ  ಪಕ್ಷದ ಮುಖಂಡರು,  ಕಾರ್ಯಕರ್ತರು ಅವರನ್ನು ಅಭಿನಂದಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತಿ ಅಧ್ಯಕ್ಷ  ದಿನಕರ್ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಾಸಕ  ರಘುಪತಿ ಭಟ್, ಯಶ್ಪಲ್ ಸುವರ್ಣ, ನವೀನ್ ಶೆಟ್ಟಿ ,ಸಂಧ್ಯಾ ರಮೇಶ್ ,ಮಣಿರಾಜ್ ಶೆಟ್ಟಿ ,ಸುರೇಶ್ ಶೆಟ್ಟಿ ,ಪ್ರಕಾಶ್ ಶೆಟ್ಟಿ ,ಪ್ರಭಾಕರ್ ಪೂಜಾರಿ, ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!