ಆಂಬುಲೆನ್ಸ್ ಪಲ್ಟಿ ನಾಲ್ವರು ಪವಾಡಸದೃಷ ಪಾರು

ಕಾರ್ಕಳ- ಗಾಯಳುಗಳನ್ನು ಸಾಗಿಸುತ್ತಿದ್ದ ೧೦೮ ಅಂಬುಲೆನ್ಸ್ ಟಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಕಾರ್ಕಳ ಗ್ರಾಮಂತರ ಠಾಣಾ ವ್ಯಾಪ್ತಿಯ ನೀರೆಜೆಡ್ಡು ಎಂಬಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ.

ಅಜೆಕಾರು ಪ್ರಾಥಮಿಕ ಆರೋಗ್ಯ ಕೆಂದ್ರದ ಅಂಬುಲೆನ್ಸ ರೋಗಿಯೊಬ್ಬರನ್ನು ಉಡುಪಿಗೆ ಕರೆದುಕೊಂಡು ಬರುವ ಸಂದರ್ಭ ನೀರೆಜಡ್ಡು ತಿರುವಿನಲ್ಲಿ ಟಯರ್ ಸ್ಪೋಟಗೊಂಡು ಮೋರಿಗೆ ಡಿಕ್ಕಿ ಹೊಡೆಯಿತು ಈ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿತ್ತು. ಚಾಲಕ ಸಹಿತ ಅಂಬುಲೆನ್ಸನಲ್ಲಿದ್ದ ನಾಲ್ವರು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ. ಕಾರ್ಕಳ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!