ಮುಲ್ಕಿ ಪೊಲೀಸರ ಕಾರ್ಯಾಚರಣೆ ಅಂತರಾಜ್ಯ ಕಳ್ಳರ ಬಂಧನ

ಮುಲ್ಕಿ ಪೋಲಿಸ್ ಠಾಣಾ ವ್ಯಾಪ್ತಿಯ ಕದಿಕೆ ಸಂತೆಕಟ್ಟೆಯ ಮನೆ ಹಾಗು ದೈವಸ್ಥಾನ ಕಳ್ಳತನ ಪ್ರಕರಣಕ್ಕೆ ಸಂಬಧಿಸಿ ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಒಟ್ಟು೪೦ ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಆರೋಪಿಗಳಾದ ಕೊಲ್ನಾಡಿನ ಸವಾದ್(೨೪) ಮತ್ತು ತೋಕೂರು ಮಹಮ್ಮದ್ ಸೀನಾನ್ (೧೯) ಗೋವಾ ರಾಜ್ಯದಲ್ಲಿ ಕಳವು ಮಾಡಿದ ಪಾರ್ಚುನರ್ ಕಾರು, ೨ ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ
ಆರೋಪಿಗಳು ಕಳವು ಕೃತ್ಯಕ್ಕೆ ಬಳಸಿದ ಮಂಗಳೂರು ನೊಂದಣಿಯ ಟಾಟಾ ಪಿಕಪ್,೨ ಭೈಕ್,೩ ಮೊಬೈಲ್ ವಶಪಡಿಸಿಕೋಳ್ಳಲಾಗಿದೆ ಇನ್ನೋರ್ವ ಆರೋಪಿ ಈ ಕೃತ್ಯದಲ್ಲಿ ಭಾಗಿಯಾದ ಹಿಯಾಜ್ ಸಹಿತ ಇನ್ನಿತರರು ತಲೆಮರೆಸಿಕೊಂಡಿದ್ದು ಇವರ ಹುಡುಕಾಟ ಮುಂದುವರೆದಿದೆ

ಈ ಪ್ರಕರಣದ ಪತ್ತೆಗೆ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸಂದೀಪ್ ಪಾಟೀಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಶ್ರೀ ಹನುಮಂತರಾಯ ಉಪ ಪೊಲೀಸ್ ಆಯುಕ್ತರು ಕಾ&ಸು ಮತ್ತು ಮಾನ್ಯ ಲಕ್ಷ್ಮಿಗಣೇಶ್ ಉಪ ಪೊಲೀಸ್ ಆಯುಕ್ತರು ಅಪರಾಧ ಮತ್ತು ಸಂಚಾರ ರವರ ನಿರ್ದೇಶನದಂತೆ ಮಾನ್ಯ ಶ್ರೀನಿವಾಸ ಗೌಡ ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪ ವಿಭಾಗ ರವರ ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಸತೀಶ್, ಸಿದ್ದರಾಜು, ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಶೀತಲ್ ಆಲಗೂರ, ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರಶೇಖರ್, ಹೆಡ್ ಕಾನ್ಸ್ ಟೇಬಲ್ ಗಳಾದ ತಾರನಾಥ, ಧರ್ಮೇಂದ್ರ, ಚಂದ್ರಶೇಖರ್, ಪ್ರಮೋದ್, ಮಹೇಶ್, ಶ್ರೀಮತಿ ಸೌಮ್ಯ ಸಿಬ್ಬಂದಿಗಳಾದ ಸುರೇಶ್, ರಾಜೇಶ್, ಮೊಹಮ್ಮದ್ ಹುಸೇನ್, ಅಣ್ಣಪ್ಪ, ಸಂದೀಪ್, ದರ್ಮರಾಯ, ಹನುಮಂತ, ಬಸವರಾಜ, ಸತೀಶ್, ರೋಹಿತ್, ಧನರಾಜ್, ರಂಗನಗೌಡ, ರಮೇಶ್, ಶರೀಪ್, ನದಾಪ್, ಮೇಘ, ವಿದೀಪ್ ರವರು ಭಾಗವಹಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!