ಉಡುಪಿ: ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ

ಉಡುಪಿ (ಉಡುಪಿ ಟೈಮ್ಸ್ ವರದಿ) ಕೆ.ಕೃಷ್ಣ ಮೂರ್ತಿ ಆಚಾರ್ಯ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಮತ್ತು ಪ್ರಸಾದ್ ನೇತ್ರಾಲಯ ಜಂಟಿ ಆಶ್ರಯದಲ್ಲಿ ಅ 31 ರಂದು ಉಚಿತ ಕನ್ನಡಕವನ್ನು 250 ಕ್ಕೂ ಅಧಿಕ ಫಲಾನುಭವಿಗಳಿಗೆ ವಿತರಣಾ ಕಾರ್ಯಕ್ರಮ ಮಥುರ ಜಯಕೃಷ್ಣ ಕಲಾಭವನ ರಾಜಾಂಗಣ ಪಾರ್ಕಿಂಗ್ ಏರಿಯಾದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ ಡಾ ಕೃಷ್ಣಪ್ರಸಾದ್ ಮತ್ತು ಕೆ. ಕೃಷ್ಣಮೂರ್ತಿ ಆಚಾರ್ಯ ವಕೀಲರಾದ ಸಂಜೀವ ಪೂಜಾರಿ, ನಗರಸಭಾ ಸದಸ್ಯರಾದ ಅಮೃತಾ ಕೃಷ್ಣ ಮೂರ್ತಿ, ಚರಣರಾಜ್ ಬಂಗೇರ, ಸೌರಭ್ ಬಲ್ಲಾಳ್, ಗಣೇಶ್ ಶೇರಿಗಾರ್, ಯಶೋದ ಆಟೋ ಯೂನಿಯನ್ ತಾಲೂಕು ಅಧ್ಯಕ್ಷರಾದ ಉದಯ್ ಪಾಂದುಬೆಟ್ಟು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್, ರವಿ ಸೇರಿಗಾರ್, ನಾಗರಾಜ್ ಕಾಮತ್ ಮತ್ತು ನಾರಾಯಣ್ ಸುವರ್ಣ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯುವರಾಜ್ ಪಿ ಮಾಜಿ ನಗರಸಭಾ ಅಧ್ಯಕ್ಷರು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!