ಮಾರುತಿ ವೀಥಿಕಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ

ಉಡುಪಿ (ಉಡುಪಿ ಟೈಮ್ಸ್ ವರದಿ): ಉಡುಪಿ ಇಲ್ಲಿನ ಮಾರುತಿವೀಥೀಕಾದ ಜೋಸ್ ಆಲುಕಾಸ್ ಆಭರಣದ ಮಳಿಗೆಯ ಮುಂಭಾಗದಲ್ಲಿ ಕನ್ನಡ ಚಿತ್ರನಟ ಕೊಡುಗೈ ದಾನಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಉದ್ಯಮಿ ಗುರುರಾಜ ಎಮ್ ಶೆಟ್ಟಿ ‌ರವರು ಪುಷ್ಪ ನಮನ ಸಲ್ಲಿಸಿ ದೀಪಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು,

ಈ ಸಂದರ್ಭದಲ್ಲಿ 21 ವರ್ಷ ಹಿಂದೆ ವರನಟ ಅಪರಣ ವಾದಾಗ ಹುಟ್ಟಿಕೊಂಡ ರಾಜಕುಮಾರ್ ಅವರ ಅಭಿಮಾನಿ ಸಂಘದ ಪತ್ರಿಕಾ ವರದಿಯ ದಾಖಲಾತಿಯನ್ನು ಪುನೀತ್ ರಾಜಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಈ ಹಿಂದೆ ನೀಡಿದ್ದೆವು, ಎಂದು ನೆನಪಿಸಿಕೊಂಡ ಗಣೇಶ ರಾಜ್ ಸರಳೇಬೆಟ್ಟುರವರು ಪುನೀತ್ ರಾಜ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ,ಹಾಗೂ ಅವರ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಕಣ್ಣು ದಾನ ಮಹತ್ವ ,ಹಾಗೂ ಅಭಿಮಾನಿಗಳಿಗೂ ಪ್ರೇರಣೆಯಾಗಿದೆ,
ಎಂದರು, ಈ ಸಂದರ್ಭದಲ್ಲಿ ಕೃಷ್ಣ ಡೈಮಂಡ್ ನ ಮಾಲಕರಾದ ರವೀಂದ್ರ,, ಗುರುರಾಜ್ ಎಮ್ ಶೆಟ್ಟಿ, ಸುಧೀರ್ ಶೇಟ್, ಸುನಿಲ್ ಶೇಟ್. ರಾಜೇಶ್ ಕಲ್ಮಾಡಿ. ಚಂದ್ರ ಗಾಣಿಗ. ಗಾಯಕ ಹರೀಶ್ ನಿಟ್ಟೂರ್ ಪ್ರಸನ್ನ ರಾಜ್ ಮಟ್ಟದಬೆಟ್ಟು, ಕಮಲಾಕರ್, ಭಾಸ್ಕರ್ ಮೆಂಡನ್, ಪ್ರಶಾಂತ್,ಮೇಸ್ತ್ರಿ ಶಿವಪ್ಪ, ಉಮೇಶ್, ಗೋಕುಲ್ ಕಾಮತ್, ದಿನೇಶ್ ನಾಯಕ್, ರಾಮಾನಾಥ್ ನಾಯಕ್, ಸುಧೀರ್ ಶೆಟ್ಟಿ ಬನ್ನಂಜೆ, ಮೊದಲಾದವರು ಜೊತೆಗಿದ್ದು ಶ್ರದ್ಧಾಂಜಲಿ ಅರ್ಪಿಸಿದರು ,ಹರೀಶ್ ಶೇರಿಗಾರ್ ನಿಟ್ಟೂರುರವರು ಪುನೀತ್ ರಾಜ್ ಕುಮಾರ್ ನಟಿಸಿ ಹಾಡಿದ ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಹಾಡನ್ನು ಹಾಡಿ. ನೆನಪಿಸಿಕೊಂಡರು.. ಈ ಕಾರ್ಯಕ್ರಮವನ್ನು ಗಣೇಶ ಸರಳೇಬೆಟ್ಟು ನಿರ್ವಹಿಸಿ, ರಾಜೇಶ್ ಕಲ್ಮಡಿ ವಂದನಾರ್ಪಣೆಗೈದರು.

Leave a Reply

Your email address will not be published. Required fields are marked *

error: Content is protected !!