ಮಲ್ಪೆ: ಕಲ್ಲಿಗೆ ಡಿಕ್ಕಿ ಹೊಡೆದ ಬೋಟ್- ಲಕ್ಷಾಂತರ ರೂ. ನಷ್ಟ

ಸಾಂದರ್ಭಿಕ ಚಿತ್ರ

ಉಡುಪಿ ಅ.28 (ಉಡುಪಿ ಟೈಮ್ಸ್ ವರದಿ): ಕಲ್ಲಿಗೆ ಡಿಕ್ಕಿ ಹೊಡೆದು ಬೋಟ್ ವೊಂದು ಮುಳುಗಡೆಯಾದ ಘಟನೆ ಇಂದು ಬೆಳಗ್ಗಿನ ಜಾವ ಮಲ್ಪೆಯ ವಡಾರು ಕಲ್ಲಿನ ಬಳಿ ನಡೆದಿದೆ.

ಕಲ್ಯಾಣಪುರದ ಭಾರತಿ ತಿಂಗಳಾಯ ಅವರ ಮಾಲಕತ್ವದ ಶ್ರೀ ನವಶಕ್ತಿ ಎಂಬ ಹೆಸರಿನ ಬೋಟ್ ಇದಾಗಿದ್ದು, ಮೀನುಗಾರಿಕೆ ನಡೆಸಿ ಮರಳುತ್ತಿದ್ದ ವೇಳೆ ನೀರಿನ ಅಡಿ ಭಾಗದ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಬೋಟ್‍ನಲ್ಲಿದ್ದ ಮೀನುಗಾರರನ್ನು ಇತರ ಬೋಟ್‍ನ ಮೀನುಗಾರರ ಸಹಾಯದಿಂದ ರಕ್ಷಿಸಲಾಗಿದೆ. ಬೋಟ್‍ನನ್ನು ತಡಕ್ಕೆ ತರಲಾಗಿದ್ದು, ಘಟನೆಯಿಂದ 20 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!