ಬ್ರಹ್ಮಾವರ: ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ರವರ ನೂತನ ಶಾಖೆ ಫ್ರೆಡ್ಡೀಸ್ ರೆಸ್ಟ್ರೋ ಕೆಫೆ ಉದ್ಘಾಟನೆ

ಉಡುಪಿ ಅ.28 (ಉಡುಪಿ ಟೈಮ್ಸ್ ವರದಿ): ದುಬೈನಲ್ಲಿ ಪ್ರಸಿದ್ಧಿ ಪಡೆದಿರುವ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ರವರ ನೂತನ ಫ್ರೆಡ್ಡೀಸ್ ರೆಸ್ಟ್ರೋ ಕೆಫೆ ನಿನ್ನೆ ಉದ್ಘಾಟನೆ ಗೊಂಡಿತು. ದುಬೈ ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ರವರ ಬ್ರಹ್ಮಾವರದ ಶಾಖೆ 9 ನೇ ಸ್ಪೋಟ್ರ್ಸ್ ಲಾಂಜ್ ಆಗಿದ್ದು, ಭಾರತದ ಮೊತ್ತ ಮೊದಲ ಶಾಖೆಯಾಗಿದೆ.

ಜಿಲ್ಲೆಯ ಬ್ರಹ್ಮಾವರದ ಫಾರ್ಚೂನ್ ಪ್ಲಾಝಾ ಹೋಟೆಲ್ ನಲ್ಲಿ ನೂತನವಾಗಿ ಆರಂಭಗೊಂಡಿರುವ ಫ್ರೆಡ್ಡೀಸ್ ರೆಸ್ಟ್ರೋ ಕೆಫೆಯನ್ನು ಕನ್ನಡ ಖ್ಯಾತ ಚಲನಚಿತ್ರ ನಟ,ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ, ನಟ ಪ್ರಮೋದ್ ಶೆಟ್ಟಿ, ಬಿಗ್‍ಬಾಸ್ ವಿಜೇತ ಶೈನ್ ಶೆಟ್ಟಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಈ ವೇಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿಉಜ್ವಲ್ ಡೆವಲಪ್ಮೆಂಟ್‍ನ ಪ್ರವರ್ತಕ ಪುರುಷೋತ್ತಮ್ ಪಿ. ಶೆಟ್ಟಿ ದೀಪ ಪ್ರಜ್ವಲಿಸಿ ಸಂಸ್ಥೆ ಇನ್ನಷ್ಟು ಉನ್ನತಕೇರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಸಂಸ್ಥೆ ಹೆಚ್ಚಿನ ಲಾಭ ಗಳಿಸುವ ಮೂಲಕ ಮತ್ತಷ್ಟು ಯಶಸ್ಸನ್ನು ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಸಂಸ್ಥೆಯ ಮುಖ್ಯಸ್ಥ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಫ್ರೆಡ್ಡೀಸ್ ರೆಸ್ಟೋ ಕೆಫೆಯಲ್ಲಿ ಎಲ್‍ಇಡಿ ವಾಲ್, ಡಿಜೆಯನ್ನು ಒಳಗೊಂಡಿದ್ದು, ಬಿಲಿಯಾಡ್ರ್ಸ್ ವ್ಯವಸ್ಥೆಯನ್ನು ಒಳಗೊಂಡಿದೆ. ಒಳಾಂಗಣ ಮತ್ತು ಹೊರಾಂಗಣದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿದೆ. ದುಬೈಯಲ್ಲಿ ಯಶಸ್ವಿ ಲಾಂಜ್ ಉದ್ಯಮದ ಮೂಲಕ ಹೆಸರು ಗಳಿಸಿದ ಸಂಸ್ಥೆ ಭಾರತದಲ್ಲಿ ಮೊದಲ ಬಾರಿಗೆ ಕರಾವಳಿಯ ಜನತೆಗೆ ತನ್ನದೇ ಆದ ವಿಶೇಷ ಅಂತಾರಾಷ್ಟ್ರೀಯ ವೈವಿಧ್ಯಮಯ ಖಾದ್ಯಗಳನ್ನು ಉಣ ಬಡಿಸಲಿದೆ. ಫಾರ್ಚೂನ್ ಪ್ಲಾಜಾ ಹೋಟೆಲ್‍ನಲ್ಲಿ ಈಗಾಗಲೇ ಕೆಫೆ, ರೆಸ್ಟೋರೆಂಟ್, 23 ಸಂಪೂರ್ಣ ಹವಾನಿಯಂತ್ರಿತ ರೂಮ್‍ಗಳು ಲಭ್ಯವಿದೆ. ತಮ್ಮ ಹೋಟೆಲ್‍ನ ಸೇವೆಯ ಬಗ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರ ಖುಷಿಯೇ ನಮ್ಮ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಪ್ರಸಾದ್, ಬ್ರಹ್ಮಾವರ ಸರ್ಕಲ್ ಇನ್ಸ್‍ಪೆಕ್ಟರ್ ಅನಂತ ಪದ್ಮನಾಭ, ದೈಜಿವರ್ಲ್ಡ್ ವಾಹಿನಿ ವ್ಯವಸ್ತಾಪಕ ನಿರ್ದೇಶಕರಾದ ವಾಲ್ಟರ್ ನಂದಳಿಕೆ, ಕೋಟೇಶ್ವರ ಯುವ ಮೆರೆಡಿಯನ್‍ನ ಮಾಲಕರಾದ ಉದಯ್ ಕುಮಾರ್ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಮರತ್ತೂರು ಸುರೇಶ್ ಶೆಟ್ಟಿ, ಕೆ.ಸಿ. ರಾಜೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!