ಶಿಮ್ಲಾ: ಹಿಮಪಾತ ಮೂವರು ಪಾದಯಾತ್ರಿಕರ ಸಾವು

ಶಿಮ್ಲಾ ಅ.25 : ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ನಡೆದ ಭಾರೀ ಹಿಮಪಾತದಿಂದಾಗಿ ಮೂವರು ಪಾದಯಾತ್ರಿಕರು ಸಾವನ್ನಪ್ಪಿದ್ದಾರೆ.

ಕಿನ್ನೌರ್‍ನಲ್ಲಿ ಬುರಾನ್ ಪಾಸ್ ಬಳಿ ಇರುವ ಸಮುದ್ರ ಮಟ್ಟದಿಂದ 4,696 ಮೀಟರ್ ಎತ್ತರದಲ್ಲಿ ಸಿಲುಕಿಕೊಂಡಿದ್ದ 10 ಮಂದಿಯನ್ನು ಇಂಡೋ-ಟಿಬೆಟಿಯನ್ ಗಡಿಯ ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುರಾನ್ ಪಾಸ್ ನಲ್ಲಿ ಗುಂಪೊಂದು ಸಿಕ್ಕಿ ಹಾಕಿಕೊಂಡಿರುವ ಮಾಹಿತಿ ಬಂದ ನಂತರ 10 ಪಾದಯಾತ್ರಿಕರಲ್ಲಿ ಒಂಬತ್ತು ಮಂದಿ ಮುಂಬೈನವರು ಮತ್ತು ಒಬ್ಬರು ನವದೆಹಲಿಯವರು ಎಂದು ತಿಳಿದುಬಂದಿದೆ ಎಂದು ಜಿಲ್ಲಾಡಳಿತದ ಅಧಿಕಾರಿ ಹೇಳಿದ್ದಾರೆ.

ಮೃತಪಟ್ಟ ಮೂವರು ಯಾತ್ರಿಕರು ಶಿಮ್ಲಾದ ರೋಹ್ರುದಲ್ಲಿರುವ ಜಂಗ್ಲಿಖ್ ನಿಂದ ಸಾಂಗ್ಲಾದ ಕಿನ್ನೌರ್‍ಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೂವರು ಪಾದಯಾತ್ರಿಕರ ಮೃತ ದೇಹಗಳನ್ನು ನಾಲ್ಕು ಅಡಿ ಹಿಮದ ಕೆಳಗೆ ಹೂಳಲಾಗಿದೆ ಎಂದು ಕಿನ್ನೌರ್ ನ ಅಪರ ಆಯುಕ್ತ ಅಪೂರ್ವ್ ದೇವಗನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!