ಕೋಲಾರ: ಅಗ್ರಿಗೋಲ್ಡ್‌ ಕಂಪನಿ ವಂಚನೆ ,ಏಜೆಂಟ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕೋಲಾರ(ಸೆ.23): ತಾಲೂಕಿನ ಹೊಲ್ಲಂಬಳ್ಳಿ ಗ್ರಾಮದಲ್ಲಿ ಅಗ್ರಿಗೋಲ್ಡ್‌ ಕಂಪನಿಯ ಏಜೆಂಟ್‌ವೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡಿ.ಎಂ. ಶ್ರೀನಿವಾಸಪ್ಪ (53) ಆತ್ಮಹತ್ಯೆ ಮಾಡಿಕೊಂಡವರು.

ಇವರು 2004 ರವರೆಗೂ ಅಗ್ರಿಗೋಲ್ಡ್‌ನಲ್ಲಿ ಏಜೆಂಟ್ ಆಗಿದ್ದರು. ಹಾಗೂ ಸಂಸ್ಥೆಗೆ 2 ಕೋಟಿ ಸಂಗ್ರಹಿಸಿ ಕೊಟ್ಟಿದ್ದರು. ಅಗ್ರಿಗೋಲ್ಡ್‌ ಕಂಪನಿಯ ವಂಚನೆ ಬಯಲಾದ ಬಳಿಕ ಸಂಸ್ಥೆಗೆ ಪಾವತಿಸಿದ ಹಣ ವಾಪಸ್ ಕೊಡಿಸುವಂತೆ ಗ್ರಾಹಕರು ಪೀಡಿಸುತ್ತಿದ್ದರು. ಅಲ್ಲದೆ ಈ ಕುರಿತಾದ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರೂ ಜನ ಕೇಳುತ್ತಿರಲಿಲ್ಲ. ಇದರಿಂದಾಗಿ ಶ್ರೀನಿವಾಸಪ್ಪ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!