ಉಡುಪಿ : ಅಸಾಯಕ ವ್ಯಕ್ತಿಯ ಕೃತಕ ಕಾಲು ಜೋಡಣೆಗೆ ಬೇಕಿದೆ ನೆರವಿನ ಹಸ್ತ

ಉಡುಪಿ ಸೆ.10 (ಉಡುಪಿ ಟೈಮ್ಸ್ ವರದಿ): ಅಪಘಾತದಲ್ಲಿ ಕಾಲು ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಸ್ಥಳೀಯರ ಸಹಾಯದಿಂದ ಹೊಸಬೆಳಕು ಆಶ್ರಮದ ಸಂಸ್ಥಾಪಕರು ರಕ್ಷಿಸಿ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದರೆ ಇದೀಗ ಅವರ ಕೃತಕ ಕಾಲು ಸಂಪೂರ್ಣ ಹಾಳಾಗಿದ್ದು ಸಹೃದಯಿ ದಾನಿಗಳ ನೆರವು ಯಾಚಿಸುತ್ತಿದ್ದರೆ.

ಕರಾವಳಿ ಯೂತ್ ಕ್ಲಬ್ ನವರು ವ್ಯಕ್ತಿಯೊಬ್ಬರು ಅಸಾಹಯಕ ಸ್ಥಿತಿಯಲ್ಲಿ ಇರುವ ಬಗ್ಗೆ ನೀಡಿದ ಮಾಹಿತಿ ಯಂತೆ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ತನುಲಾ ತರುಣ್ ಹಾಗೂ ವಿನಯಚಂದ್ರ ಸ್ಥಳಕ್ಕೆ ತೆರಳಿ ಅವರ ರಕ್ಷಣೆ ಮಾಡಿದ್ದರು. ಹಾಗೂ ಅವರಿಗೆ ಕೃತಕ ಕಾಲು ಜೋಡಣೆ ಮಾಡಲಾಗಿತ್ತು. ಇದೀಗ ಅವರ ಕೃತಕ ಕಾಲು ಸಂಪೂರ್ಣ ಹಾಳಾಗಿದ್ದು, ಯಾರಾದರೂ ಸಹೃದಯಿ ದಾನಿಗಳು ಸಹಕರಿಸಬೇಕಾಗಿದೆ. ಇವರಿಗೆ ಹೊಸ ಕೃತಕ ಕಾಲು ಜೋಡಿಸಲು ಸಹಕಾರ ನೀಡಲು ಬಯಸುವವರು 9620417570, 6364777100 ನ್ನು ಸಂಪರ್ಕಿಸುವಂತೆ ಹೊಸ ಬೆಳಕು ಸಂಸ್ಥೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!