ಕೋಟ: ಜೈ ಕುಂದಾಪುರ ಸೇವಾ ಟ್ರಸ್ಟ್ನ ವತಿಯಿಂದ ಸಾಮಾಜಿಕ ಕಾರ್ಯಕರ್ತನಿಗೆ ಗೌರವ
ಕೋಟ(ಉಡುಪಿ ಟೈಮ್ಸ್ ವರದಿ): ಕೋಟದ ಸಾಮಾಜಿಕ ಕಾರ್ಯಕರ್ತ ಇತ್ತೀಚಿಗೆ ಜೈ ಕುಂದಾಪುರ ಸೇವಾ ಟ್ರಸ್ಟ್ನ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀಕಾಂತ್ ಶೆಣೈ ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಕುಂದಾಪುರ ಸಾಮಾಜಿಕ ಕಳಕಳಿಯ ಸೇವಾ ಟ್ರಸ್ಟ್ ಜೈಕುಂದಾಪುರ ಸೇವಾಟ್ರಸ್ಟ್ ವತಿಯಿಂದ ಕೋಟದ ಶನೀಶ್ಚರ ದೇವಳದ ಸನ್ನಿಧಿಯಲ್ಲಿ ಸನ್ಮಾನಿಸಲಾಯಿತು.
ಕಳೆದ ಕೋವಿಡ್ ಸಂದರ್ಭದಲ್ಲಿ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷ ರೂ ಮೌಲ್ಯದ ಆಹಾರ ಸಾಮಾಗ್ರಿ ದಿನಸಿ ಕಿಟ್ ,ಬಡ ಕುಟುಂಬಗಳಿಗೆ ಆರ್ಥಿಕ ಸಹಕಾರ ನೀಡಿ ಮಾನವೀಯತೆ ಮೆರೆದಿದ್ದಾರೆ.ಈ ಬಾರಿ ಕೋವಿಡ್ ಸಂದರ್ಭದಲ್ಲೂ ಅನಾರೋಗ್ಯ ಪೀಡಿತ ಕುಟುಂಬಗಳನ್ನು ಗುರುತಿಸಿ ಮೆಡಿಸಿನ್ ಕಿಟ್,ಇನ್ನಿತರ ಸೇವೆಗಳನ್ನು ಮಾಡಿ ಸಾರ್ವಜನಿಕ ವಲಯದಲ್ಲಿ ಪ್ರಶಂಸನೀಯ ಕಾರ್ಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜೈ ಕುಂದಾಪುರ ಸೇವಾ ಟ್ರಸ್ಟ್ ನ ಮುಖ್ಯಸ್ಥ ಪುಂಡಲೀಕ ಮರಕಾಲ. ಸಂಸ್ಥೆಯ ಗೌರವ ಸಲಹೆಗಾರರಾಗಿರುವ ಶ್ರೀ ಶಾಸ್ತ ಮೊಬೈಲ್ ಕೋಟ ಮಾಲೀಕ ಆದಿತ್ಯ ಕೋಟ , ಪ್ರದಾನ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಪಡುಕರೆ , ಮುಖ್ಯ ಸದಸ್ಯರುಗಳಾದ ಸುರೇಶ್ ಶೆಟ್ಟಿ ಮಂದಾರ್ತಿ ಹಾಗೂ ಅಕ್ಷಯ ಕೋಟ, ಶ್ರೀದೇವಿ ಬಿಲ್ಲಾಡಿಯವರು ಉಪಸ್ಥಿತರಿದ್ದರು.
ಕೋಟದ ಸಾಮಾಜಿಕ ಕಾರ್ಯಕರ್ತ ಇತ್ತೀಚಿಗೆ ಜೈ ಕುಂದಾಪುರ ಸೇವಾ ಟ್ರಸ್ಟ್ನ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀಕಾಂತ್ ಶೆಣೈ ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಕುಂದಾಪುರ ಸಾಮಾಜಿಕ ಕಳಕಳಿಯ ಸೇವಾ ಟ್ರಸ್ಟ್ ಜೈಕುಂದಾಪುರ ಸೇವಾಟ್ರಸ್ಟ್ ವತಿಯಿಂದ ಕೋಟದ ಶನೀಶ್ಚರ ದೇವಳದ ಸನ್ನಿಧಿಯಲ್ಲಿ ಸನ್ಮಾನಿಸಲಾಯಿತು. ವಾ ಟ್ರಸ್ಟ್ ನ ಮುಖ್ಯಸ್ಥ ಪುಂಡಲೀಕ ಮರಕಾಲ. ಸಂಸ್ಥೆಯ ಗೌರವ ಸಲಹೆಗಾರರಾಗಿರುವ ಆದಿತ್ಯ ಕೋಟ, ಪ್ರಧಾನ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.