ಉಡುಪಿ: ಮಳೆಗಾಲದ ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ನಗರಸಭೆಯಿಂದ ಸಹಾಯವಾಣಿ
ಉಡುಪಿ ಮೇ.23(ಉಡುಪಿ ಟೈಮ್ಸ್ ವರದಿ): ನಗರಸಭಾ ವ್ಯಾಪ್ತಿಯಲ್ಲಿ ಈ ಬಾರಿಯ ಮಳೆಗಾಲವನ್ನು ಯಾವುದೇ ಅನಾಹುತ ಸಂಭವಿಸದಂತೆ ಸಮರ್ಪಕವಾಗಿ ನಿರ್ವಹಿಸಲು ನಗರಸಭೆಯ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ.
ಮಳೆಗಾಲದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಕಛೇರಿಯ ಸಹಾಯವಾಣಿ ಕಂಟ್ರೋಲ್ ರೂಂ ಸಂಖ್ಯೆ 0820-2520306 ಅನ್ನು ಹಾಗೂ ನೋಡಲ್ ಅಧಿಕಾರಿಗಳಾದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದುರ್ಗಾ ಪ್ರಸಾದ್ ದೂ.ಸಂ. 9741943666, ಪರಿಸರ ಅಭಿಯಂತರರಾದ ಸ್ನೇಹ ಕೆ.ಎಸ್ ದೂ.ಸಂ. 9164397765, ಕಚೇರಿ ವ್ಯವಸ್ಥಾಪಕರಾದ ನಾರಾಯಣ ಎಸ್ ಎಸ್ ದೂ.ಸಂ. 9448723833, ಕಂದಾಯ ಅಧಿಕಾರಿಯಾದ ಸಂತೋಷ್ ಎಸ್.ಡಿ ದೂ.ಸಂ. 9449747209, ಕಂಟ್ರೋಲ್ ರೂಂ ನೋಡಲ್ ಅಧಿಕಾರಿಯಾದ ಕೆ. ದಿವಾಕರ್ ದೂ. ಸಂ. 7483026687 ಅನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.





