ಹೆಬ್ರಿ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

ಹೆಬ್ರಿ ಏ.22(ಉಡುಪಿ ಟೈಮ್ಸ್ ವರದಿ): ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು  ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ರಿಯ ಕಬ್ಬನಾಲೆ ಗ್ರಾಮದ ನೀರತೋಡ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಕೆ ಸುಬ್ಬರಾವ್ (75) ಮೃತಪಟ್ಟರು. ಕೃಷಿ ಕೆಲಸವನ್ನು ಮಾಡಿಕೊಂಡಿದ್ದ ಇವರು, ಏ.21 ರಂದು ರಾತ್ರಿ ಹೆಬ್ರಿಯ ಕಬ್ಬನಾಲೆ ಗ್ರಾಮದ ನೀರತೋಡ ಮನೆ ಎಂಬಲ್ಲಿರುವ ತಮ್ಮ ತೋಟದಲ್ಲಿರುವ ಕೆರೆಯ ಹತ್ತಿರ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!