ಮಲ್ಪೆ: ಸಮುದ್ರದ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು

ಮಲ್ಪೆ ಏ.22(ಉಡುಪಿ ಟೈಮ್ಸ್ ವರದಿ): ಸಮುದ್ರದ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಲ್ಪೆ ಸಮುದ್ರ ತೀರದಲ್ಲಿ ನಡೆದಿದೆ. 

ಮೃತರನ್ನು ಮಂಡ್ಯಾದ ಉಷಾರಾಣಿ ಎಂಬವರ ಮಗ ನಾಗೇಂದ್ರ ಪ್ರಸಾದ್‌ ಎಂದು ಗುರುತಿಸಲಾಗಿದೆ. 

ಇವರು ಏ.20 ರಂದು ರಾತ್ರಿ ನಾಗಸಂದ್ರದ ನಿವಾಸದದ ಬಳಿಯ ಸ್ನೇಹಿತರಾದ ಚೇತನ, ಮನು ಆರ್‌ ಎಸ್‌, ಪ್ರದೀಪ್‌ ಕುಮಾರ, ಹರೀಶ ಇವರುಗಳೊಂದಿಗೆ  ಶೃಂಗೇರಿಗೆ ಹೋಗಿರುವುದಾಗಿ ತಮ್ಮ ತಾಯಿ ಕರೆ ಮಾಡಿದಾಗ ತಿಳಿಸಿದರು.

ಆ ಬಳಿಕ ಏ.21 ರಂದು ಸಂಜೆ ಮಗನಿಗೆ  ಕರೆ ಮಾಡಿದಾಗ ಬೇರೆ ಒಬ್ಬ ವ್ಯಕ್ತಿ ಕರೆ ಸ್ವೀಕರಿಸಿ ಅವರ ಮಗ ನಾಗೇಂದ್ರ ಪ್ರಸಾದರವರು ಮಲ್ಪೆ ಬೀಚ್ ನಲ್ಲಿ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.  ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!