ಮಣಿಪಾಲದಲ್ಲಿ ಸೆಕ್ಯೂರಿಟಿಯಾಗಿದ್ದ ವ್ಯಕ್ತಿ ನಾಪತ್ತೆ

ಮಣಿಪಾಲ ಮಾ.12(ಉಡುಪಿ ಟೈಮ್ಸ್ ವರದಿ): ಮಣಿಪಾಲದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಕೊಪ್ಪಳ ಜಿಲ್ಲೆಯ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಪ್ಪಳ ಮೂಲದ ಮಾರುತಿ ತಳವಾರ (27) ನಾಪತ್ತೆಯಾಗಿರುವವರು. ಮಣಿಪಾಲದಲ್ಲಿ ಸೆಕ್ಯುರಿಟಿ ಕಲೆಸ ಮಾಡಿಕೊಂಡಿದ್ದ ಇವರು, ಕೆಲಸ ಕಷ್ಟ ಆಗುತ್ತಿದೆ , ಕೆಲಸ ಬಿಡುವುದಾಗಿ ಹಾಗೂ ಬೇರೆ ಕಡೆ ಕೆಲಸ ಮಾಡುವುದಾಗಿ ತಮ್ಮ ಅಣ್ಣನ ಬಳಿ ಹೇಳುತ್ತಿದ್ದರು. ಆ ಬಳಿಕ 2023 ರ ಡಿ.8 ರಂದು  ಮಧ್ಯಾಹ್ನದ ವೇಳೆ  ತಾನು ವಾಸವಿದ್ದ ಬಾಡಿಗೆ ಮನೆಯಿಂದ ಹೋದವರು ಮನೆಯವರ ಫೋನ್‌ ಸಂಪರ್ಕಕ್ಕೆ ಸಿಗದೇ, ಸಂಬಂಧಿಕರ ಮನೆಗೂ ಹೋಗದೇ, ಬೇರೆ ಕಡೆ ಕೆಲಸಕ್ಕೂ ಹೋಗದೇ ಕಾಣೆಯಾಗಿದ್ದಾರೆ ಎಂಬುದಾಗಿ ನಾಪತ್ತೆಯಾಗಿರುವವರ ಅಣ್ಣ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!