ಜೈಪುರ: ಕಾರಿನ ಮೇಲೆ ಕಂಟೇನರ್ ಪಲ್ಟಿ ನಾಲ್ವರ ದಾರುಣ ಸಾವು

ಜೈಪುರ: ರಾಜಸ್ಥಾನದಲ್ಲಿ ಇಂದು (ಏ.3) ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಮಾರ್ಬಲ್ ತುಂಬಿದ್ದ ಕಂಟೇನರ್ ಕಾರಿನ ಮೇಲೆ ಬಿದ್ದು, ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ಜೋಧ್ ಪುರ ನಿವಾಸಿಗಳಾಗಿದ್ದ ಮನೋಜ್ ಶರ್ಮಾ, ಅಶ್ವಿನ್ ಕುಮಾರ್ ಡೇವ್ ಹಾಗೂ ಅವರ ಪತ್ನಿ ರಶ್ಮಿ ದೇವಿ ಮತ್ತು ಬುಧರಂ ಪ್ರಜಾಪತ್ ಮೃತಪಟ್ಟವರು. ಇವರು, ಅಹಮದಾಬಾದ್ ಗೆ ಮೀಟಿಂಗ್ ಪ್ರಯುಕ್ತ ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಕಂಟೇನರ್ ಹೊತ್ತಿದ್ದ ಗಾಡಿಯ ಚಾಲಕ, ಕಾರನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದಾನೆ.

ತಿರುವಿನಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಗಾಡಿಯ ನಿಯಂತ್ರಣ ತಪ್ಪಿದ್ದು, ಕಂಟೇನರ್ ಕಾರಿನ ಮೇಲೆ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರು ಅಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಗ್ರಾಮಸ್ಥರು ಬಂದು ಸೇರಿದ್ದಾರೆ. ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು, ಮೃತ ದೇಹಗಳನ್ನು ಕಾರಿನಿಂದ ಹೊರತೆಗೆದು, ಶವಾಗಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!