ಅಮಾಸೆಬೈಲು: ವ್ಯಕ್ತಿ ನಾಪತ್ತೆ
ಅಮಾಸೆಬೈಲು ಮೇ 29 (ಉಡುಪಿ ಟೈಮ್ಸ್ ವರದಿ): ಕುಂದಾಪುರದ ಮಚ್ಟಟ್ಟು ಗ್ರಾಮದಿಂದ ಆಂದ್ರ ಪ್ರದೇಶಕ್ಕೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೋದ ವ್ಯಕ್ತಿಯೊಬ್ಬರು ಮೇ 24 ರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ.
ಸ್ಥಳೀಯ ನಿವಾಸಿ ಸತೀಶ ನಾಪತ್ತೆಯಾಗಿರುವವರು. ಗೊಬ್ಬರ ತುಂಬುವ ಕೆಲಸ ಮಾಡಿಕೊಂಡಿದ್ದ ಅವರು ಮೇ 24 ರಂದು ರಾತ್ರಿ ಕೆಲಸಕ್ಕೆ ಆಂದ್ರಕ್ಕೆ ಹೊಗುತ್ತೆನೆಂದು ಹೇಳಿ ಹೋದವರು ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ಗೆ ಕರೆ ಮಾಡಿದರೂ ಸ್ವಿಚ್ ಆಫ್ ಆಗಿರುತ್ತದೆ. ಈ ಬಗ್ಗೆ ಸಂಬಂಧಿಕರಲ್ಲಿ, ನೆರೆ ಕರೆಯಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂಬುದಾಗಿ ನಾಪತ್ತೆಯಾಗಿರುವ ಸತೀಶ್ ಅವರ ಪತ್ನಿ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.