ಕುಂದಾಪುರ: ಗೂಳಿ ಗುದ್ದಿ ಕೆರೆಗೆ ಬಿದ್ದ ಮಹಿಳೆ ಮೃತ್ಯು

ಕುಂದಾಪುರ: ಮೇ 28 : ತಾಲೂಕಿನ ಕೆಂಚನೂರು ಎಂಬಲ್ಲಿ ಗೂಳಿಯೊಂದು ಗುದ್ದಿದ ಪರಿಣಾಮ ಮಹಿಳೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಕರ್ಕುಂಜೆಯ ಗಿರಿಜಾ(42) ಮೃತಪಟ್ಟ ಮಹಿಳೆ. ಇವರು ಕೆಂಚನೂರಿನ ಭಾಸ್ಕರ ಪೂಜಾರಿ ಎಂಬವರ ತೋಟದ ಕೆಲಸವನ್ನು ಮುಗಿಸಿ ವಾಪಾಸು ತಮ್ಮ ಮನೆಗೆ ಹೊರಟಿದ್ದರು. ಈ ವೇಳೆ ಮಾವಿನಕೆರೆಯ ದಂಡೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಬಂದ ಗೂಳಿಯೊಂದು ಗಿರಿಜಾ ಅವರಿಗೆ ಗುದ್ದಿದೆ. ಪರಿಣಾಮ ಆಯತಪ್ಪಿ ಮಾವಿನಕೆರೆಗೆ ಬಿದ್ದ ಗಿರಿಜಾ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!