ಬೈಂದೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ತಂಡದಿಂದ ಹಲ್ಲೆ

ಬೈಂದೂರು ಮೇ.4(ಉಡುಪಿ ಟೈಮ್ಸ್ ವರದಿ): ಸೋಮೇಶ್ವರ ಬೀಚ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ

ಮೇ.2 ರಂದು ಸಂಜೆ ವೇಳೆ ಸಂಜಯ್ ಇವರು ತನ್ನ ಸ್ನೇಹಿತರಾದ ಹರೀಶ್ ಮತ್ತು ನವೀನ ರೊಂದಿಗೆ ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ನಲ್ಲಿ ತಿರುಗಾಡುತ್ತಿದ್ದರು. ಈ ನಡುವೆ ಇವರ ಬಳಿ ನಾಲ್ಕೈದು ಜನರು ಬಂದು ಜೊತೆಗಿದ್ದ ಹರೀಶ್ ಎಂಬವನಲ್ಲಿ  ನೀನೇನಾ ಹರೀಶ್ ಎಂದು ಕೇಳಿ ಶಿವರಾಜ್ ಮತ್ತು ನಾಗರಾಜ್ ಎಂಬವರು ಹರೀಶನಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನಂತರ ಅಲ್ಲಿಯೇ ಪಕ್ಕದಲ್ಲಿದ್ದ ತೆಂಗಿನ ಹೆಡೆಮಡಿಯಿಂದ ಹರೀಶ್‌ಗೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!