ಉಡುಪಿ: ಬಸ್ ಡಿಕ್ಕಿ- ಹೊಟೇಲ್ ಕಾರ್ಮಿಕ ಮೃತ್ಯು.
ಉಡುಪಿ ಎ.17(ಉಡುಪಿ ಟೈಮ್ಸ್ ವರದಿ) : ನಗರದ ತ್ರಿವೇಣಿ ಸರ್ಕಲ್ ಬಳಿ ಕೆಎಸ್.ಆರ್.ಟಿಸಿ ಬಸ್ ಡಿಕ್ಕಿ ಹೊಡೆದು ಪಾದಚಾರಿ ಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ರಾಜಶೇಖರ ಪೂಜಾರಿ (68) ಮೃತಪಟ್ಟವರು. ಇವರು ತಾವು ಕೆಲಸ ಮಾಡುತ್ತಿದ್ದ ಹೋಟೆಲ್ ಗೆ ಹೋಗಲು ರಸ್ತೆ ದಾಟಿ ನಿಂತಿದ್ದರು. ಈ ವೇಳೆ ಉಡುಪಿ ಕೆಎಮ್ ಮಾರ್ಗ ಕಡೆಯಿಂದ ಬಸ್ಸು ನಿಲ್ದಾಣದ ಕಡೆಗೆ ಕೆಎಸ್ಆರ್ಟಿಸಿ ಬಸ್ಸನ್ನು ನಿರ್ಲಕ್ಷ್ಯ ತನದಿಂದ ಚಲಾಯಿಸಿಕೊಂಡು ಬಂದ ಅದರ ಚಾಲಕ ನಾಗರಾಜ ಎಂಬಾತನು ರಾಜಶೇಖರ ಪೂಜಾರಿ ರವರಿಗೆ ಡಿಕ್ಕಿಹೊಡೆದಿದ್ದಾನೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಆದವರನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಸ್ಪತ್ರೆಯಲ್ಲಿ ರಾಜಶೇಖರ್ ಪೂಜಾರಿಯವರು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.