ಬೆಂಗಳೂರು: ಗಗನಸಖಿ ಅನುಮನಾಸ್ಪದ ಸಾವು- ಓರ್ವನ ಬಂಧನ

ಬೆಂಗಳೂರು ಮಾ.15 : ಬೆಂಗಳೂರಿನ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಒಂದರ ಬಾಲ್ಕನಿಯಿಂದ ಗಗನಸಖಿ ಅರ್ಚನಾ ಧಿಮಾನ್ (28) ಅವರನ್ನು ಕೆಳಕ್ಕೆ ತಳ್ಳಿ ಕೊಲೆ ಮಾಡಿರುವ ಆರೋಪದ ಮೇಲೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿಯ ಆದರ್ಶ (26) ಬಂಧಿತ ಆರೋಪಿ. ಈತ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ ಉದ್ಯೋಗಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಿಮಾಚಲ ಪ್ರದೇಶದವರಾದ ಅರ್ಚನಾ ಧಿಮಾನ್ ಬೆಂಗಳೂರು- ದುಬೈ ಮಾರ್ಗದ ವಿಮಾನದಲ್ಲಿ ಗಗನಸಖಿಯಾಗಿದ್ದರು. ಶನಿವಾರ ನಸುಕಿನಲ್ಲಿ ಆದರ್ಶ ವಾಸಿಸುವ ಕೋರಮಂಗಲದ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಅರ್ಚನಾ ಅವರು ಕೆಳಕ್ಕೆ ಬಿದ್ದು ಮೃತಪಟ್ಟಿದ್ದರು.  ಅರ್ಚನಾ ಅವರ ತಾಯಿ ನೀಡರುವ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿರುವ ಕೋರಮಂಗಲ ಪೊಲೀಸರು ಆದರ್ಶನನ್ನು ನಿನ್ನೆ ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!