ಗಂಗೊಳ್ಳಿ: ಮಹಿಳೆಗೆ ಜೀವ ಬೆದರಿಕೆ-ದೂರು ದಾಖಲು

ಗಂಗೊಳ್ಳಿ ಫೆ.22 (ಉಡುಪಿ ಟೈಮ್ಸ್ ವರದಿ) : ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಹೋಲಿಕ್ರಾಸ್ ಹತ್ತಿರ ಮನೆಗೆ ಹೋಗುವ ದಾರಿಗೆ ಅಡ್ಡಲಾಗಿ ಶೌಚಾಲಯದ ಗುಂಡಿಯನ್ನು ತೋಡಿರುವ ಬಗ್ಗೆ ಆಕ್ಷೇಪಿಸಿದ್ದಕ್ಕೆ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುಜ್ಜಾಡಿ ಗ್ರಾಮದ ಕೊಡಪಾಡಿ ನಿವಾಸಿ ದೇವಿ ಅವರಿಗೆ ಸಂಬಂಧಿಸಿದ ಕೊಡಪಾಡಿ ಹೋಲಿಕ್ರಾಸ್ ಹತ್ತಿರದ ಜಾಗದ ಎದುರುಗಡೆ ಆಪಾದಿತರಾದ ಭಾರತಿ ಗಾಣಿಗ, ಕೀರ್ತಿರಾಜ್, ನಾಗರಾಜ ಗಾಣಿಗರವರು ಅಕ್ರಮವಾಗಿ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಈ ಬಗ್ಗೆ ದೇವಿ ರವರು ಗ್ರಾಮ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿದ್ದರು. ಫೆ.16 ರಂದು ದೇವಿ ರವರ ಮನೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಕಟ್ಟಡದ ಹಿಂಬಾಗದಲ್ಲಿ ಆಪಾದಿತರು ಶೌಚಾಲಯದ ಗುಂಡಿಯನ್ನು ನಿರ್ಮಿಸುತ್ತೀರುವಾಗ ದೇವಿ ಇವರು ಇದಕ್ಕೆ ಆಕ್ಷೇಪಣೆ ಮಾಡಿದ್ದರು. ಈ ವೇಳೆ ಆಪಾದಿತರಾದ ಭಾರತಿ ಗಾಣಿಗ, ಕೀರ್ತಿರಾಜ್, ಹಾಗೂ ನಾಗರಾಜ ಗಾಣಿಗ ರವರು ದೇವಿ ರವರ ಕಡೆಯವರೊಂದಿಗೆ ಜಗಳ ಮಾಡಿ, ಆಪಾದಿತ ಕೀರ್ತಿರಾಜ್‍ ನು ದೇವಿ ರವರಿಗೆ ಹಾಗೂ ಅಕ್ಕಮ್ಮ, ಮತ್ತು ಜಯಂತಿಯವರಿಗೆ ಹೊಡೆಯಲು ಬಂದಿದ್ದು, ಅಲ್ಲದೇ ಅವಾಚ್ಯವಾಗಿ ಬೈದು ನಿಮ್ಮನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಹಾಗೂ ಈದಕ್ಕೆಲ್ಲಾ ಆಪಾದಿತೆ ಭಾರತಿ ಗಾಣಿಗ ರವರು ಕುಮ್ಮಕ್ಕು ನೀಡಿರುವುದಾಗಿ ದೇವಿ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!