ಮಣಿಪಾಲ: ಚಾಲಕ, ನಿರ್ವಾಹಕನ ನಿರ್ಲಕ್ಷ್ಯ: ಬಸ್ ನಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ
ಮಣಿಪಾಲ ಫೆ.22 : ರಾಂಪುರ ಜಂಕ್ಷನ್ನಲ್ಲಿ ಬಸ್ ಬಳಿ ಬಸ್ ಚಾಲಕ ಹಾಗೂ ನಿರ್ವಾಹಕರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮಾಲಿನಿ ಎಂ. ರಾವ್ (68) ಗಾಯಗೊಂಡ ಮಹಿಳೆ. ಬಸ್ ನ್ನು ಉಡುಪಿ ಕಡೆಯಿಂದ ದೆಂದೂರುಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಚಾಲಕ ಕಾಗನೂರು ಭರ್ಮಪ್ಪ ರಾಂಪುರ ಜಂಕ್ಷನ್ನಲ್ಲಿ ಬಸ್ ನಿಲ್ಲಿಸಿದ್ದ. ಈ ವೇಳೆ ಮಾಲಿನಿ ಎಂ. ರಾವ್ ಅವರು ಮುಂಬಾಗಿಲಿನಿಂದ ಬಸ್ ಹತ್ತುತ್ತಿರುವಾಗಲೇ ನಿರ್ವಾಹಕ ಬಸ್ ಹೊರಡುವ ಸೂಚನೆ ನೀಡಿದ ಕಾರಣ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದ. ಪರಿಣಾಮ ಮಾಲಿನಿ ಅವರು ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಘಟನೆಯಿಂದ ಮಾಲಿನಿ ಅವರ ತಲೆಗೆ ತೀವ್ರ ತೆರನಾದ ಗಾಯವಾಗಿದ್ದು, ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.