ದೆಹಲಿ ತಾರಕ್ಕೇರಿದ ರೈತರ ಪ್ರತಿಭಟನೆ: ರಾತ್ರಿ 12 ರವರೆಗೆ ಇಂಟರ್ನೆಟ್ ಸ್ಥಗಿತ

ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ರೈತರ ಕಿಚ್ಚು ಹೆಚ್ಚಾಗುತ್ತಿರುವ ಹಿನ್ನೆಲೆ ದೆಹಲಿಯಲ್ಲಿ ರಾತ್ರಿ 12 ಗಂಟೆಯವರೆಗೆ ಇಂಟರ್ನೆಟ್ ಸ್ಥಗಿತಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ.
ದೆಹಲಿಯಲ್ಲಿ ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ಇಂದು ನಡೆಯುತ್ತಿರುವ ಟ್ರ್ಯಾಕ್ಟರ್ ಪರೇಡ್ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಕೆಂಪು ಕೋಟೆಗೆ ಮುತ್ತಿಗೆ ಹಾಕಿರುವಂತ ರೈತರು, ರಾಷ್ಟ್ರದ ರಾಜಧಾನಿಯಲ್ಲಿ ತಮ್ಮ ಕಿಚ್ಚನ್ನು ಮೊಳಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರತಿಭಟನೆ ತೀವ್ರಗೊಂಡಿರುವಂತ ಸಿಂಘು, ತಿಕ್ರಿ ಹಾಗೂ ಗಾಜಿಪುರ್ ಪ್ರದೇಶದಲ್ಲಿ ಕೇಂದ್ರ ಗೃಹ ಇಲಾಖೆಯ ಸೂಚನೆಯ ಮೇರೆಗೆ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

1 thought on “ದೆಹಲಿ ತಾರಕ್ಕೇರಿದ ರೈತರ ಪ್ರತಿಭಟನೆ: ರಾತ್ರಿ 12 ರವರೆಗೆ ಇಂಟರ್ನೆಟ್ ಸ್ಥಗಿತ

  1. ಇದು ನಿಜವಾಗಿಯೂ ಭಾರತದ ವಿರೋಧಿಗಳ ಹತಾಶಮನಃಸ ಪರಮಾವಧಿ! ಈ ರೈತರ ಚಳುವಳಿಯಲ್ಲಿ ದೇಶದ್ರೋಹಿಗಳ ಕೈವಾಡದ ಬಗ್ಗೆ ಈ ಚಳುವಳಿಯ ನೇತೃತ್ವ ವಹಿಸಿದ ಪಂಜಾಬ್, ಹರ್ಯಾಣ ದ ರೈತ ಮುಖಂಡರು ಏನು ಹೇಳುತ್ತಾರೆ? ನವದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಕಿತ್ತು ಖಲಿಸ್ತಾನ್ ಧ್ವಜ ಹಾರಿಸಿದ್ದರ ಉದ್ದೇಶವನ್ನು ರೈತ ಮುಖಂಡರು, ಇವರಿಗೆ ಸಂಪೂರ್ಣ ಬೆಂಬಲನೀಡಿದ ನಮ್ಮ ದೇಶದ ಎಡಬಿಡಂಗಿ ಕಾಂಗ್ರೆಸ್ ಪಕ್ಷದ ಆಷಾಢಭೂತಿ ನಾಯಕ ರಾಹುಲ್ ಗಾಂಧಿ ಎಂಬ ನಪುಂಸಕನೂ, ಕಮ್ಯುನಿಸ್ಟ್ ತತ್ವ ಸಿದ್ಧಾಂತಿಗಳೂ, ಅದರಲ್ಲೂ ಮುಖ್ಯವಾಗಿ ಸಿದ್ಧು,ಡಿಕೆಶಿ ಯೂ, ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಬೊಬ್ಬೆ ಹೊಡೆಯುವ ಬೊಗ್ರಪ್ಪನಂತಹಾ ಮತಿಗೇಡಿಗಳೂ ಏನೆನ್ನುತ್ತಾರೆ ಎಂಬುದನ್ನು ಕಾದು ನೋಡಬೇಕು.!!!

Leave a Reply to ಅಶೋಕ್ ಕುಮಾರ್ Cancel reply

Your email address will not be published. Required fields are marked *

error: Content is protected !!