ಕೊನೆಗೂ ಸಿಕ್ತು ಮಜೂರು ಗ್ರಾ.ಪಂ ವ್ಯಾಪ್ತಿಯ 92 ಹೇರೂರು, ಉಲ್ಬೆ ಪರಿಸರದ ನಿವಾಸಿಗಳಿಗೆ ರಸ್ತೆ ಭಾಗ್ಯ

ಉಡುಪಿ ಜ.30 (ಉಡುಪಿ ಟೈಮ್ಸ್ ವರದಿ): ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92 ಹೇರೂರು, ಉಲ್ಬೆ ಪರಿಸರದ ಜನರ ಹಲವಾರು ವರ್ಷಗಳ ಸಾರ್ವಜನಿಕ ರಸ್ತೆಯ ಬೇಡಿಕೆಯೊಂದು ಇದೀಗ ಗ್ರಾಮ ಪಂಚಾಯತ್ ಸದಸ್ಯ ವಿಜಯ್ ದೀರಜ್ ರವರ ಪ್ರಯತ್ನದಿಂದ ನೆರವೇರಿದಂತಾಗಿದೆ.

ಭೂಮಾಲಿಕರಾದ ವಿಲಿಯಂ ಕೆಸ್ತಲಿನೋ, ರೊನಾಲ್ಡ್ ಪಿಂಟೋ, ಸೆಲಿನ ಬರ್ಬೋಜ ಅಶೋಕ್, ವಿಶ್ವನಾಥ್, ಸುಬ್ರಾಯ ಪ್ರಭು, ದೇವಯ್ಯ ಪ್ರಭು ಕುಟುಂಬಸ್ಥರು, ಕಮಲಪ್ರಭು, ಸೀತಾರಾಮ ನಾಯಕ್ ಹಾಗೂ ಇನ್ನೂ ಹಲವಾರು ದಾನಿಗಳ ಉದಾರತೆಯಿಂದಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ನೂತನ ರಸ್ತೆ ಯೊಂದರ ನಿರ್ಮಾಣವಾಗಿದೆ. ಈ ರಸ್ತೆ ನಿರ್ಮಾಣಕ್ಕೆ ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರು ಜೆ.ಸಿ.ಬಿ ವೆಚ್ಚವನ್ನು ಭರಿಸಿದ್ದಾರೆ.

ಇದೀಗ ಗ್ರಾಮಸ್ತರು ರಸ್ತೆ ನಿರ್ಮಾಣಕ್ಕಾಗಿ ಜಮೀನನ್ನು ಕೊಟ್ಟ ಭೂಮಾಲಕರು ಆರ್ಥಿಕ ಸಹಾಯ ಮಾಡಿದ ವಿನಯಕುಮಾರ್ ಸೊರಕೆಯವರಿಗೆ ಮತ್ತು ಗ್ರಾಮ ಪಂಚಾಯತ್ ಸದಸ್ಯ ವಿಜಯ್ ದೀರಜ್ ಅವರಿಗೆ ಕೃತಜ್ಞತೆ ಹಾಗೂ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!